ಸಚಿವ ನಾರಾಯಣಗೌಡರ ಆ ಕೆಲಸಕ್ಕೆ ಭೇಷ್ ಎಂದ ತ್ರಿಪುರಾ ಡಿಸಿಎಂ

ಸೋಮವಾರ, 25 ಮೇ 2020 (12:41 IST)
ಸಚಿವ ಡಾ. ನಾರಾಯಣ ಗೌಡ ಮಾಡಿದ ಕೆಲಸಕ್ಕೆ ತ್ರಿಪುರಾದ ಉಪಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

ತ್ರಿಪುರಾ ಡಿಸಿಎಂ ಜಿಶ್ನು ದೇವ ವರ್ಮ ಹಾಗೂ ಸಚಿವ ಮೇವರ್ ಕುಮಾರ್ ಜಮಾತಿಯಾ ಅವರು ಸಚಿವ ನಾರಾಯಣಗೌಡರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ವೈರಸ್ ನಿಂದಾಗ ದೇಶ ಲಾಕ್ಡೌನ್ ಆಗಿತ್ತು.

ಈ ಕಾರಣದಿಂದ ದೇಶದ ನಾನಾಕಡೆಯಲ್ಲಿ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ತ್ರಿಪುರಾದ ವಲಸಿಗರೂ ಕರ್ನಾಟಕ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಅವರಿಗೆ ನೆರವು ನೀಡಿದ್ದಲ್ಲದೆ, ಲಾಕ್ಡೌನ್ ಬಳಿಕ ತ್ರಿಪುರಾಕ್ಕೆ ಮರಳಲು ವಲಸಿಗರಿಗೆ ಸಚಿವ ನಾರಾಯಣ ಗೌಡ ಸಹಾಯಹಸ್ತ ಚಾಚಿದ್ದರು.

ವಲಸಿಗರ ನೆರವಿಗೆ ಧಾವಿಸಿದ್ದಕ್ಕೆ ತ್ರಿಪುರಾದ ಉಪಮುಖ್ಯಮಂತ್ರಿ ಜಿಶ್ನು ದೇವ ವರ್ಮ ಮತ್ತು ಟ್ರೈಬಲ್ ವೆಲ್ಫೇರ್ ಹಾಗೂ ಅರಣ್ಯ ಇಲಾಖೆ ಸಚಿವ ಮೇವರ್ ಕುಮಾರ್ ಜಮಾತಿಯಾ ಅವರು ಕರ್ನಾಟಕದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರಾದ ನಾರಾಯಣಗೌಡ ಅವರಿಗೆ ಪತ್ರ ಮುಖೇನ  ಧನ್ಯವಾದ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ