ತುಮಕೂರು ಶ್ರೀ: ಮಂಡ್ಯದಲ್ಲಿ ಎಂಎಲ್ಸಿ ಹೇಳಿದ್ದೇನು?

ಶುಕ್ರವಾರ, 18 ಜನವರಿ 2019 (19:02 IST)
ತುಮಕೂರು ಸಿದ್ಧಗಂಗಾ ಸ್ವಾಮೀಜಿಗಳು ನಡೆದಾಡುವ ದೇವರು. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಎಂದು ವಿಧಾನ ಪರಿಷತ್ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಹೇಳಿಕೆ ನೀಡಿದ್ದು, ನಮ್ಮ ರಾಷ್ಟ್ರದಲ್ಲೇ ಶಿವಕುಮಾರ್ ಸ್ವಾಮೀಜಿ 111 ವಸಂತಗಳನ್ನು ದಾಟಿ 112 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನಡೆದಾಡುವ ದೇವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹ ಮಾಡಿದರು.

ಆ ಮೂಲಕ ಸಮಾಜ ಸೇವೆಗೆ, ಜ್ಯಾತ್ಯಾತೀತತೆಗೆ ಎಲ್ಲಾ ವರ್ಗಕ್ಕೆ ಆಶ್ರಯ ನೀಡಿದ ಮಠ ಯಾವುದಾದರೂ ಇದ್ರೆ ಅದು ಸಿದ್ದಗಂಗಾ ಮಠ ಎಂದ ಅವರು, ಸ್ವಾಮೀಜಿಗಳ ಕಾರ್ಯಕ್ಕೆ, ಸಮಾಜಸೇವೆಗೆ ಸರಿಸಾಟಿ ಮತ್ತೊಬ್ಬರಿಲ್ಲ.
ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ನೀಡಬೇಕು ಎಂದು ಶಾಸಕ ಅಪ್ಪಾಜಿಗೌಡ ಒತ್ತಾಯ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ