ಹೆಣ್ಣು ಮಕ್ಕಳಿಬ್ಬರಿಗೆ ವಿಷ ಕುಡಿಸಿ ಕೊಲೆ‌ ಪ್ರಯತ್ನ

ಸೋಮವಾರ, 7 ಆಗಸ್ಟ್ 2023 (21:00 IST)
ಹೆಣ್ಣು ಮಕ್ಕಳಿಬ್ಬರಿಗೆ ವಿಷ ಕುಡಿಸಿ ಕೊಲೆ‌ಪ್ರಯತ್ನಕ್ಕೆ ಯತ್ನಿಸಿರೋ  ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಕಳೆದ ಮಂಗಳವಾರ ದೇವನಹಳ್ಳಿಯ ದೊಡ್ಡಸಣ್ಣೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗ್ರಾಮದ ವಾಸಿಯಾಗಿರೋ ಶಿಲ್ಪ ಮತ್ತು ಅಶೋಕ ಕೆಲಸಕ್ಕೆ ಹೋಗಿದ್ದಾಗ ಮುಂಜಾನೆ ಆರು ಗಂಟೆಗೆ ಮನೆಗೆ ಮುಸುಕು ಧರಿಸಿ ಬಂದಿದ್ದ ಅನಾಮಿಕ‌ ವ್ಯಕ್ತಿ 13ವರ್ಷದ ಪಲ್ಲವಿಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಮಗಳನ್ನು ಆಸ್ಪತ್ರೆಗೆ ಸೇರಿಸಿ ಕುಟುಂಬ ನೋವಿನಲ್ಲಿ ಇರುವಾಗ್ಲೆ ಎರಡು ನಂತರ ಅಂದ್ರೆ ಗುರುವಾರ ಮತ್ತೊಬ್ಬ ಮಗಳಾದ 15ವರ್ಷದ ಅನುಷಾಗೆ ಮತ್ತೆ ಅದೇ ಮುಸುಕುದಾರಿ ಬಂದು ವಿಷ ಕುಡಿಸಿದ್ದಾನೆ.‌ ಇದಕ್ಕೆ ಅನುಷ ಪ್ರತಿರೋಧ ವ್ಯಕ್ತಪಡಿಸಿದಾಗ ಎಡಗೈಗೆ ಚಾಕು ಇರಿದು ವಿಷ ಕುಡಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಆದ್ರೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳೂ ಮೂಡಿದೆ. ಯಾಕಂದ್ರೆ ಎರಡನೇ ಬಾರಿ ಅನುಷಾಳಿಗೆ ವಿಷ ಕುಡಿಸುವಾಗ ಮೊದಲು ನೀಡಿದ ಎಫ್ ಐ ಆರ್ ವಾಪಸ್ ಪಡೆಯುವಂತೆ ಬೆದರಿಸಿ ವಿಷ ಕುಡಿಸಿರೋದಾಗಿ ಆರೋಪಿಸಲಾಗಿದೆ‌. ಇನ್ನೂ     ಅನುಷ ಮತ್ತು ಪಲ್ಲವಿ ಇಬ್ರು ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದು ಒಂದೇ ಗ್ರಾಮದಲ್ಲಿ ವಾಸ ಮಾಡ್ತಿದ್ರು. ಘಟನೆ ಕುರಿತು ದೇವನಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಎಫ್ ಐ ಆರ್ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ