ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಗುದ್ದಿ ಸ್ಥಳದಿಂದ ಪರಾರಿ-ಳದಲ್ಲೇ ಇಬ್ಬರು ಸಾವು

geetha

ಮಂಗಳವಾರ, 16 ಜನವರಿ 2024 (15:00 IST)
ತುಮಕೂರು :  ಹೆದ್ದಾರಿಯಲ್ಲಿ ವಾಹನವೊಂದು ಇಬ್ಬರಿಗೆ ಗುದ್ದಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಸೋಮವಾರ ಶಿರಾ ತಾಲೂಕಿನ ಕುಂಟೇಗೌಡನ ಹಳ್ಳಿಯ ಬಳಿ ನಡೆದಿದೆ. ಇಬ್ಬರು ಸ್ಥಳದಲ್ಲ ಮೃತಪಟ್ಟಿದ್ದಾರೆ.

ಬೆಂಗಳೂರಿನ ಆವಲಹಳ್ಳಿ ನಿವಾಸಿಗಳಾದ ಮಹೇಶ್‌ (40) ಮತ್ತು ಉಮೇಶ್‌ (40) ಮೃತ ದುರ್ದೈವಿಗಳು.  ತುಮಕೂರಿನಿಂದ ಶಿರಾಗೆ ಹೋಗುತ್ತಿರುವಾಗ ಇವರ ಕಾರ್‌ ಪಂಚರ್‌ ಆಗಿತ್ತು. ರಸ್ತೆ ಬದಿಯಲ್ಲಿ ಕಾರ್‌ ನಿಲ್ಲಿಸಿ ಟೈರ್‌ ಬದಲಿಸುತ್ತಿರುವುದಾಗ ಈ ದುರ್ಘಟ ನಡೆದಿದೆ. ಕಳ್ಳಂಬೆಳ್ಳ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ