ಅಡ್ರೆಸ್ ಇಲ್ಲದವರು ಎಂದ ಶ್ರೀರಾಮುಲುಗೆ ತಿರುಗೇಟು ನೀಡಿದ ವಿ.ಎಸ್.ಉಗ್ರಪ್ಪ

ಬುಧವಾರ, 17 ಅಕ್ಟೋಬರ್ 2018 (13:15 IST)
ಬಳ್ಳಾರಿ : ಬಳ್ಳಾರಿ ಲೋಕಸಭಾ ಉಪಚುನಾವಣೆ ಅಡ್ರೆಸ್ ಇರುವ ಜೆ. ಶಾಂತಾ ಹಾಗೂ ಅಡ್ರೆಸ್ ಇಲ್ಲದ ಉಗ್ರಪ್ಪ ನಡುವಿನ ಹೊರಾಟ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಹೇಳಿರುವುದಕ್ಕೆ ಇದೀಗ ವಿ.ಎಸ್. ಉಗ್ರಪ್ಪ ಶ್ರೀರಾಮುಲುಗೆ ತಿರುಗೇಟು ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಶ್ರೀರಾಮುಲು ಅವರ ಹೇಳಿಕೆಯನ್ನು ನಾನು ಮತದಾರರ ವಿವೇಚನೆಗೆ ಬಿಡ್ತೀನಿ. ಮತದಾರರನ್ನು ಹೇಗಂದರೇ ಹಾಗೆ ಬಳಸಿಕೊಳ್ಳಲು ಆಗಲ್ಲ. ಶ್ರೀರಾಮುಲು ಅವರು 2 ದಶಕಗಳಿಂದ ರಾಜಕಾರಣ ಮಾಡ್ತಿರಬಹುದು. ಆದರೆ ಅವರಿಂದ ಮೂರು ಬಾರಿ ಬೈ ಎಲೆಕ್ಷನ್ ನಡೆದಿದೆ ಎಂದು ಹೇಳಿದ್ದಾರೆ.


ಹಾಗೇ ಶ್ರೀರಾಮುಲು ಅವರು ನನಗೆ ಅಡ್ರೆಸ್ ಇಲ್ದೋರು ಎಂದು ಹೇಳಿದ್ದಾರೆ. ಹಾಗಾದ್ರೆ ಸುಷ್ಮಾ ಸ್ವರಾಜ್ ನ ಕರೆ ತಂದಿದ್ದು ಯಾರು? ರಾಯಚೂರು, ಬದಾಮಿ, ಮೊಳಕಾಲ್ಮೂರಿಗೆ ಹೋಗಿದ್ದು ಯಾರು? ಅವರು ಯಾವ ಅಡ್ರೆಸ್ ಮೇಲೆ ಹೋಗಿದ್ರು? ಎಂದು ತಿರುಗೇಟು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ