ಉಮೇಶ್ ಜಾಧವ್ 50 ಕೋಟಿಗೆ ಡೀಲ್?: ಬಿಜೆಪಿ ಸಂಸದೆ ಬಾಯ್ಬಿಟ್ಟರು ಸ್ಫೋಟಕ ಸತ್ಯ!

ಬುಧವಾರ, 15 ಮೇ 2019 (15:32 IST)
ರಾಜ್ಯದಲ್ಲಿ ಕಾಂಗ್ರೆಸ್ ನವರ ಕೊಡುಗೆ ಶೂನ್ಯವಾಗಿದೆ.  ಕಾಂಗ್ರೆಸ್ ನವರಿಗೆ ಮತಕೇಳುವ ಯಾವುದೇ ನೈತಿಕತೆ ಇಲ್ಲ.
 ಮೈತ್ರಿ ಸರ್ಕಾರ ಬೀಳುತ್ತೆ ಅಂತಾ ನಾವು ಹೇಳಿಲ್ಲ, ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ಹೀಗಂತ ಬಿಜೆಪಿ ಸಂಸದೆ ದೂರಿದ್ದಾರೆ.

ಹುಬ್ಬಳ್ಳಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಉಮೇಶ ಜಾಧವ್ 50 ಕೋಟಿಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು,  ಉಮೇಶ ಜಾಧವ್ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು.  ಅವರಿಗೆ ದುಡ್ಡಿನ ಆಮೀಷಕ್ಕೆ ಒಳಗಾಗುವ ದರಿದ್ರ ಬಂದಿಲ್ಲ.  ಮೈತ್ರಿ ಸರ್ಕಾರದ ಒಳಜಗಳದಿಂದಾಗಿ ಅವರು ಬಿಜೆಪಿಗೆ ಬಂದಿದ್ದಾರೆ ಎಂದರು.

 
ಡಿಕೆಶಿ ಅವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನ ಖರೀದಿ ಮಾಡಲು ನಿಂತಿದ್ದಾರೆ. ಅವರು ಖರೀದಿ ಮಾಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ.  ಆದ್ರೆ ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ ಎಂದ್ರು.

 ಮೈತ್ರಿ ಸರ್ಕಾರದ ಶಾಸಕರು ಯಾವಾಗ ರಾಜೀನಾಮೆ ಕೊಡುತ್ತಾರೆ ಆವಾಗ ಅವರನ್ನ ಮಾತನಾಡಿಸುತ್ತೇವೆ.  ನಾವು ಮೈತ್ರಿ ಸರ್ಕಾರವನ್ನ ಬೀಳಿಸುತ್ತೇವೆ ಅಂತಾ ಎಲ್ಲಿಯೂ ಹೇಳಿಲ್ಲ.  ಅವರವರೇ  ಕಚ್ಚಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಅವರ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ