ಮಗಳನ್ನು ಮದುವೆಯಾಗಲು ಮುಂದಾದ ಚಿಕ್ಕಪ್ಪ!

ಗುರುವಾರ, 11 ಜನವರಿ 2018 (13:39 IST)
ಸಂಬಂಧದಲ್ಲಿ ಮಗಳಾಗಬೇಕಾದ ಯುವತಿಯೊಂದಿಗೆ ಮದುವೆಯಾಗಲು ಯುವಕ ಮುಂದಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
 
ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ಸಾಗರ್ ಸುಗತೇಕರ್ ಎಂಬಾತ ಅದೇ ಕಾಲೋನಿಯ ಪೂನಂ ಸುಗತೇಕರ್ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಇವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರವಾಗಿ ಪ್ರೀತಿ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧವೂ ಬೆಳೆದಿತ್ತು. ಮದುವೆ ಮಾಡಿಕೊಳ್ಳಲು ವಾರದ ಹಿಂದೆ ಈ ಇಬ್ಬರು ಮನೆ ಬಿಟ್ಟು ಹೋಗಿದ್ದರು. 
 
ಸಂಬಂಧದಲ್ಲಿ ಚಿಕ್ಕಪ್ಪ-ಮಗಳ ಸಂಬಂಧವಿದ್ದು, ಹುಡುಗಿಯ ಪೋಷಕರು ಇದನ್ನು ತೀವ್ರವಾಗಿ ವಿರೋಧಿಸಿದ್ದು, ಸಮಾಜದ ಮುಖಂಡರ ಸಮಕ್ಷಮ ಪೊಲೀಸರ ನೆರವಿನಿಂದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಈಗ ಸಾಗರ್ ಈ ಸಂಬಂಧ ನನಗೇನು ಗೊತ್ತಿಲ್ಲ. ನನಗೆ ಅವಳೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾನೆ. 
 
ಹುಡುಗಿಯನ್ನು ಕರೆತರದಿದ್ದರೆ ಪೊಲೀಸ್ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರತಿಭಟನೆ ಮಾಡುತ್ತಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ