ತೆಲುಗು ನಟನ ಮೇಲೆ ಪ್ರೀತಿ ತೋರಿಸಿ ಮಂಗಳಾರತಿ ಮಾಡಿಸಿಕೊಂಡ ಬಿಗ್ ಬಾಸ್ ಅಶಿತಾ ಚಂದ್ರಪ್ಪ!

ಗುರುವಾರ, 11 ಜನವರಿ 2018 (08:51 IST)
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ಅಶಿತಾ ಚಂದ್ರಪ್ಪ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೇಲೆ ಅಭಿಮಾನ ವ್ಯಕ್ತಪಡಿಸಿ ಟೀಕೆಗೆ ಗುರಿಯಾಗಿದ್ದಾರೆ.
 

ತಮ್ಮ ಫೇಸ್ ಬುಕ್ ಜಾಲತಾಣದಲ್ಲಿ ಅಶಿತಾ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾತುರಗೊಂಡಿದ್ದೇನೆ. ವೈಟಿಂಗ್ ಫಾರ್ ದಿ ಮ್ಯಾನ್ ಎಂದು ಪವನ್ ಕಲ್ಯಾಣ್ ಪೋಸ್ಟರ್ ಪ್ರಕಟಿಸಿದ್ದರು.

ಇದಕ್ಕೆ ಫಾಲೋವರ್ ಗಳು ಸಾಕಷ್ಟು ಟೀಕೆ ಮಾಡಿದ್ದಾರೆ. ನಿಮಗೆ ಉಣ್ಣಲು, ಹೆಸರು ಮಾಡಲು ಕನ್ನಡ ನೆಲ ಬೇಕು. ಆದರೆ ಹೊಗಳಲು ಪಕ್ಕದ ಊರು ಕಾಣುತ್ತಾ? ಯಾಕೆ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ಟಗರು, ಕುರುಕ್ಷೇತ್ರ, ಕೆಜಿಎಫ್ ರಿಲೀಸ್ ಆಗುವ ದಿನವನ್ನು ನೀವು ಎದುರು ನೋಡುತ್ತಿಲ್ಲವೇ? ಎಂದು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಜಗನ್ ಜತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಅಶಿತಾ ಸಾಕಷ್ಟು ಟ್ರೋಲ್ ಗೆ ಒಳಗಾಗುತ್ತಿದ್ದರು. ಇದೀಗ ಹೊರಬಂದ ಮೇಲೂ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ