ಅನ್ ಲಾಕ್ 3.O-ವಿನಾಯಿತಿ

ಶುಕ್ರವಾರ, 2 ಜುಲೈ 2021 (20:58 IST)
ಅನ್ ಲಾಕ್ 3.O  ಬಗ್ಗೆ  ಸಿಎಂ  ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ  ನಾಳೆ  ಸಂಜೆ 5.30 ಕ್ಕೆ ಮಹತ್ವದ ಸಭೆ  ನಡೆಯಲಿದೆ. ರಾಜ್ಯದಲ್ಲಿ ಕೊರೋನಾ  ಸೋಂಕಿನ ಪ್ರಮಾಣ  ತಗ್ಗಿದೆ.  ಜೊತೆಗೆ ಪಾಸಿಟಿವಿಟಿ ದರ ಕಡಿಮೆ ಕಡಿಮೆಯಾಗಿದೆ. ಹೀಗಾಗಿ  ಕಠಿಣ ನಿರ್ಬಂಧ ಮುಂದುವರೆಸುವ ಅಗತ್ಯವಿಲ್ಲ ಎಂಬ ಬಗ್ಗೆ  ನಾಳೆ ಹಿರಿಯ ಅಧಿಕಾರಿಗಳು ಹಾಗೂ  ಕೊವೀಡ್ ಉಸ್ತುವಾರಿ ಸಚಿವರಗಳೊಂದಿಗೆ  ಸಿಎಂ ಸಭೆ  ನಡೆಸಿ ಹಲವು  ಕ್ಷೇತ್ರಗಳಿಗೆ ವಿನಾಯಿತಿ  ನೀಡಲಿದ್ದಾರೆ.  ಮಾಲ್ ಗಳನ್ನ  ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, 24 ಗಂಟೆಗಳ ಕಾಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್  ನೀಡುವ ಸಾಧ್ಯತೆ ಇದೆ.  ಇನ್ನೂ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ   ತೆರವಾಗುವ ಸಾಧ್ಯ ತೆ  ಹೆಚ್ಚಾಗಿದ್ದು,  ದೇವಸ್ಥಾನಗಳನ್ನು ತೆರೆದು ಸುರಕ್ಷತಾ ಕ್ರಮಗಳನ್ನು  ಅನುಸರಿಸುವ ಮೂಲಕ ದೇವರ ದರ್ಶನಕ್ಕೆ ಭಕ್ತಾಧಿಗಳಿಗೆ ಅವಕಾಶ  ಮಾಡಿಕೊಂಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ