ವಿ ಸೋಮಣ್ಣ ಸಿದ್ದು ಭೇಟಿ ಗೆ ಯತ್ನ..!

ಭಾನುವಾರ, 5 ಮಾರ್ಚ್ 2023 (18:12 IST)
ಇತ್ತೀಚಿಗೆ ವಸತಿ ಸಚಿವ ವಿ ಸೋಮಣ್ಣ ಬಿಜೆಪಿ ಕಾರ್ಯಕ್ರಮ ಗಳಿಂದ ದೂರ ಸರಿಯುತ್ತಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಭೇಟಿ ಮಾಡಿ ಮಾತು ಕಥೆ ನಡೆಸಿದ್ದಾರೆ.ಇನ್ನೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಸುದ್ದಿ ಅಷ್ಟೇ ಅದು, ಸತ್ಯ ಇಲ್ಲ ಅವರು ನನ್ನನ್ನ ಭೇಟಿ ಮಾಡಿಲ್ಲ, ನಾನೂ ಅವರನ್ನ ಭೇಟಿ ಮಾಡ್ತಿಲ್ಲ. ಯಾರೋ ಹುಟ್ಚು ಹಾಕಿದ್ದಾರೆ ಎಂದರೂ ಇನ್ನೂ  ಶಿವಕುಮಾರ್ ರ ಮೂಲಕ  ಸೋಮಣ್ಣ ಸಿದ್ದರಾಮಯ್ಯ  ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರನ್ನ ಭೇಟಿ ಮಾಡಿದ್ದಾರೆ ಅವರನ್ನ ಕೇಳಿ, ನನ್ನ ಭೇಟಿ ಮಾಡಿಲ್ಲ ಎಂದು  ಸಿದ್ದರಾಮಯ್ಯ ಖಡಕ್ ಉತ್ತರ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ