ಬೆಳ್ಳಂಬೆಳ್ಳಗೆ ನಗರದಲ್ಲಿ ವರುಣನ ಅಬ್ಬರ- ಚಳಿಯಿಂದ ನಡುಗಿದ ಜನರು

ಮಂಗಳವಾರ, 20 ಜೂನ್ 2023 (14:54 IST)
ರಾಜಧಾನಿಯಲ್ಲಿ ಬೆಳ್ಳಂಬೆಳ್ಳಗೆ ಮಳೆ ಶುರುವಾಗಿದ್ದು ,ಹೊರಗೆ ಕಾಲಿಡಲಾಗದ ಮಟ್ಟಿಗೆ ಒಂದು ಕಡೆ ಚಳಿ ಆವರುಸಿದೆ.ಮತ್ತೊಂದ ಕಡೆ ತುಂತುರು ಮಳೆ ಶುರುವಾಗಿದೆ. ಬೆಂಗಳೂರಿಗೆ ಮಳೆಗೆ ಜನರು ಥಂಡಿ ಹೊಡೆದಿದ್ದಾರೆ.ನಗರದ ಮಲೇಶ್ವರಂ, ರಾಜಾಜಿನಗರ, ಕೆ ಆರ್ ಪುರಂ ,ಯಶವಂತಪುರ, ಮಾರ್ಕೆಟ್ ಸೇರಿದಂತೆ ಹಲವೆಡೆ ಮಳೆ.ಮಳೆಯಿಂದ ವಾಹನಸವಾರರು ಹೈರಾಣಾಗಿದ್ದಾರೆ. ಮಳೆಯ ನಡುವೆ ಜನರು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ.ಬೆಳ್ಳಿಗೆನೇ ಶುರುವಾದ ಮಳೆಯಿಂದ ಜನರು ಬೇಸೆತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ