ವೀರಶೈವ ಲಿಂಗಾಯುತರು ಒಂದಾಗಿದ್ದರೆ ಬಲ ಬರುತ್ತದೆ: ಪೇಜಾವರ ಶ್ರೀ

ಮಂಗಳವಾರ, 17 ಅಕ್ಟೋಬರ್ 2017 (17:57 IST)
ವೀರಶೈವರು ಮತ್ತು ಲಿಂಗಾಯುತರು ಒಂದಾಗಿದ್ದರೆ ಬಲ ಬರುತ್ತದೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.
ಲಿಂಗಾಯುತರು ಹಿಂದುಗಳಲ್ಲ ಅನ್ನುತ್ತಾರೆ. ಶಿವನೇ ಸರ್ವೋತ್ತಮ ಎನ್ನುತ್ತಾರೆ. ಎಲ್ಲಾ ಹಿಂದುಗಳು ಶಿವನ ಪೂಜೆ ಮಾಡುತ್ತಾರೆ. ಪಂಚಾಕ್ಷರಿ ಜಪ, ಲಿಂಗ ಪೂಜೆ ಮಾಡುತ್ತಾರೆ. ಲಿಂಗಾಯುತರು ಹಿಂದುಗಳಲ್ಲವಾದರೇ ಮತ್ಯಾರು? ಉತ್ತರ ಕೊಡಿ ಎಂದು ತಿಳಿಸಿದ್ದಾರೆ.
 
ವೀರಶೈವ ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಅಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆದರೆ ವೀರಶೈವ ಲಿಂಗಾಯುತರು ಒಂದಾಗಿ ಇರುವುದೇ ಸೂಕ್ತ ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
 
ವೀರಶೈವರು ಮತ್ತು ಲಿಂಗಾಯುತರು ಬೇರೆ ಬೇರೆಯಾಗುವುದರಿಂದ ಯಾವುದೇ ಸಾಧನೆಯಾಗುವುದಿಲ್ಲ. ಒಂದಾಗಿರುವುದು ಸೂಕ್ತ ಎನ್ನುವುದೇ ನನ್ನ ನಿಲುವು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ