ಆರ್‍ಟಿಓ ಕಚೇರಿ ಬಾಗಿಲು ಮುಚ್ಚಿದ ವಾಹನ ಸವಾರರು: ಕಾರಣ ಗೊತ್ತಾ?

ಮಂಗಳವಾರ, 26 ಜೂನ್ 2018 (17:17 IST)
ಆರ್‍ಟಿಓ ಕಚೇರಿಯ ವೇಳೆಯಲ್ಲಿಯೇ ಮುಖ್ಯದ್ವಾರವನ್ನು ಮುಚ್ಚಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸರ್ವರ್ ಪ್ರಾಬ್ಲಂ ನೆಪ ಹೇಳಿ ಅಧಿಕಾರಿಗಳು ವಾಹನ ನೊಂದಣಿ ಮಾಡಲು ನಿರಾಕರಿಸುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ವಾಹನಗಳ ಸವಾರರು ಕಚೇರಿಯ ಬಾಗಿಲು ಮುಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಅಂದಹಾಗೆ ಚಿತ್ರದುರ್ಗ ಆರ್ ಟಿ ಓ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಆರ್ ಟಿ ಓ ಕಚೇರಿಯಲ್ಲಿ ಯಾರೂ ಕೆಲಸ ಮಾಡದಂತೆ ಬಾಗಿಲನ್ನು ವಾಹನಗಳ ಸವಾರರು ಬಂದ್ ಮಾಡಿ ಬಿಸಿ ಮುಟ್ಟಿಸಿದರು.

ಸಾರಥಿ-4 ಮೂಲಕ ಆನ್ ಲೈನ್ ನೊಂದಣಿಯಲ್ಲಿ ವ್ಯತ್ಯಾಸವಾಗಿದೆ. ಅಲ್ಲದೇ ನೂತನ ನೊಂದಣಿ ಸಾರಥಿ-4 ಎಂದು ಸರಕಾರ ಆದೇಶ ಮಾಡಿತ್ತು. ಆದರೆ ಆರ್ ಟಿ ಓ ಕಚೇರಿ ಸಿಬ್ಬಂದಿ ವಾಹನಗಳ ನೊಂದಣಿ ಮಾಡುವುದನ್ನು ಬಿಟ್ಟು ಸರ್ವರ್ ಪ್ರಾಬ್ಲಂ ಎಂದು ಹೇಳುತ್ತಿದ್ದರು. ಹೀಗಾಗಿ ವಾಹನಗಳ ಸವಾರರು ಕೆಲಕಾಲ ಗರಂ ಆಗಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ