ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಫರ್ಜಿ ಕೆಫೆ ಕತೆ ಏನಾಯ್ತು?

ಮಂಗಳವಾರ, 20 ಮಾರ್ಚ್ 2018 (11:48 IST)
ಬೆಂಗಳೂರು: ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಮೇಲೆ ಯುಬಿ ಸಿಟಿಯ ಫರ್ಜಿ ಕೆಫೆ ಇನ್ನಷ್ಟು ಫೇಮಸ್ಸಾಯಿತು.

ಹಲ್ಲೆ ನಡೆಸಿದ ತಪ್ಪಿಗೆ ಆರೋಪಿಗಳು ಈಗಾಗಲೇ ಜೈಲು ಕಂಬಿ ಎಣಿಸುತ್ತಿದ್ದಾರೆ. ಆದರೆ ಹಲ್ಲೆಯ ಕೇಂದ್ರ ಬಿಂದುವಾಗಿದ್ದ ಫರ್ಜಿ ಕೆಫೆ ಕತೆ ಏನಾಯ್ತು?

ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಫರ್ಜಿ ಕೆಫೆ ಮುಚ್ಚಲು ನೋಟಿಸ್ ನೀಡಿದ್ದರು. ಹೀಗಾಗಿ ಕೆಫೆ ಬಂದ್ ಆಗಿತ್ತು. ಇದೀಗ ಮತ್ತೆ ಮಾಲಿಕರು ಕೆಫೆ ತೆರೆಯಲು ಪೊಲೀಸರ ಬಳಿ ಅನುಮತಿ ಕೋರಿದ್ದು, ಅದಕ್ಕೆ ಪೊಲೀಸ್ ಇಲಾಖೆಯೂ ಒಪ್ಪಿಗೆ ನೀಡಿದೆ. ಆದರೆ ಕೆಲವು ಷರತ್ತು ವಿಧಿಸಿದೆ. ಅಂತೂ ಮತ್ತೆ ಫರ್ಜಿ ಕೆಫೆಗೆ ಓಪನ್ ಆಗುವ ಭಾಗ್ಯ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ