ಹೆಚ್.ವಿಶ್ವನಾಥ್ ರನ್ನು ತರಾಟೆಗೆ ತೆಗೆದುಕೊಂಡ ಮತದಾರರು

ಸೋಮವಾರ, 25 ನವೆಂಬರ್ 2019 (10:39 IST)
ಮೈಸೂರು : ರಾಜೀನಾಮೆ ಯಾಕೆ ನೀಡಿದ್ರಿ ಎಂದು ಅನರ್ಹ ಶಾಸಕ ಹೆಚ್.ವಿಶ್ವಾನಾಥ್ ಅವರನ್ನು ಕ್ಷೇತ್ರದ ಜನರು ತರಾಟೆ ತೆಗೆದುಕೊಂಡ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.



ಹುಣಸೂರು ಉಪಚುನಾವಣೆ ಹಿನ್ನಲೆಯಲ್ಲಿ  ಮತಯಾಚನೆಗೆ ಹೆಚ್.ವಿಶ್ವಾನಾಥ್ ಕೊಳಗಟ್ಟ ಮತ್ತು ಶ್ರವಣಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಆ ವೇಳೆ ಗ್ರಾಮಸ್ಥರೆಲ್ಲಾ ಸೇರಿ, ಇದುವರೆಗೂ ನೀವು ನಮ್ಮ ಕಷ್ಟ ಸುಖ ಕೇಳಲು ಬಂದಿಲ್ಲ.ನಾವು ನಿಮಗೆ ಮತ ಹಾಕಿದ್ದೇವೆ. ನೀವು ರಾಜೀನಾಮೆ ನೀಡಿದ್ರಿ. ನೀವು ಯಾಕೆ ರಾಜೀನಾಮೆ ನೀಡಿದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.


ಈ ಬಗ್ಗೆ ಹೆಚ್.ವಿಶ್ವಾನಾಥ್ ಮಾತು ಕೇಳದೆ ಗ್ರಾಮಸ್ಥರ ಗಲಾಟೆ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಜನರನ್ನು ಸಮಾಧಾನಗೊಳಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ