ಸಚಿವರಿಗೆ ವಾರ್ನಿಂಗ್ : ಕರ್ನಾಟಕದಲ್ಲಿ 25 ಲೋಕಸಭೆ ಸ್ಥಾನ ಗೆಲ್ಲಬೇಕು

ಗುರುವಾರ, 3 ಆಗಸ್ಟ್ 2023 (07:29 IST)
ಬಿಜೆಪಿ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಅಂಥಾ ಆರೋಪ ನಮ್ಮ ಸರ್ಕಾರದ ಮೇಲೆ ಬರಬಾರದು. ಯಾವುದೇ ಕಾರಣಕ್ಕೂ ನಾವು ಭ್ರಷ್ಟಾಚಾರ ಸಹಿಸಲ್ಲ. ಯಾರ ವಿರುದ್ಧವಾದ್ರೂ ಸಾಕ್ಷ್ಯ ಸಿಕ್ಕಿದ್ರೆ ಮುಲಾಜಿಲ್ಲದೇ ವಜಾಗೊಳಿಸಲಾಗುವುದು.

ಒಬ್ಬರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದರೆ ಇನ್ನೋಬ್ಬರಿಗೆ ಅವಕಾಶ ಸಿಗುತ್ತೆ. ಪ್ರತಿ ಕ್ಷೇತ್ರಕ್ಕೆ ಓರ್ವ ಸಚಿವ ಹಾಗೂ ಓರ್ವ ನಾಯಕ ಉಸ್ತುವಾರಿ ವಹಿಸಿ. ಆಯಾ ಕ್ಷೇತ್ರದ ಸೋಲು ಗೆಲುವಿಗೆ ಆಯಾ ಸಚಿವರೇ ಹೊಣೆಯಾಗಿರುತ್ತಾರೆ.

ಸರ್ಕಾರದ ಮೇಲೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ನೋಡಿಕೊಳ್ಳಿ. ಪಾರದರ್ಶಕ ಆಡಳಿತ ನೀಡಿ, ನಿಮ್ಮ ನಿಮ್ಮ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ. ಪಕ್ಷಕ್ಕೆ ಈಗಿರುವ ಜನಪ್ರಿಯತೆಯನ್ನು ಉಳಿಸಿ, ಮತ್ತಷ್ಟು ಬೆಳೆಸಿ. ಸಾರ್ವತ್ರಿಕ ಚುನಾವಣೆಯಲ್ಲೂ ಮತಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ