ಕಾವೇರಿ ನೀರಿಗಾಗಿ ಇಂದು ವಾಟಾಳ್ ನಾಗರಾಜ್ ಬೃಹತ್ ರ್ಯಾಲಿ

ಗುರುವಾರ, 5 ಅಕ್ಟೋಬರ್ 2023 (14:53 IST)
ಕಾವೇರಿ ನೀರಿಗಾಗಿ ಇಂದು ಕನ್ನಡ ಚಳಿವಳಿ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ.ಕನ್ನಡ ಸಂಘಟನೆಗಳ ಒಕ್ಕೂಟದಿಂದ  500 ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರಿನಿಂದ ತೆರಳಿ‌ ಕೆ ಆರ್ ಎಸ್ ಒಕ್ಕೂಟ  ಮುತ್ತಿಗೆ ಹಾಕಲಾಗಿದೆ.
 
ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು,ಮೈಸೂರು ಬ್ಯಾಂಕ್ ಸರ್ಕಲ್ ನಿಂದ, ಉಪ್ಪಾರಪೇಟೆ ಪೊಲೀಸ್ ಸ್ಟೇಷನ್, ಕಾಟನ್ ಪೇಟೆ, ಸಿಸಿಬಿ, ಚಾಮರಾಜಪೇಟೆ ನಾಯಂಡಳ್ಳಿ, ಕೆಂಗೇರಿ ಮುಖಾಂತರ ರ್ಯಾಲಿಯಲ್ಲಿ ನೂರಾರು ಕನ್ನಡ, ರೈತಪರ ಸಂಘಟನೆ ಭಾಗಿಯಾಗಿದ್ದು,ಇನ್ನೂ ಬಿಡದಿ, ಚನ್ನಪಟ್ಟಣ, ಮಂಡ್ಯದಲ್ಲಿ ರೈತರ ಜೊತೆ ವಾಟಳ್ ನಾಗರಾಜ್ ಸಮಾಲೋಚನೆ ನಡೆಸಲಿದ್ದಾರೆ.ನಂತರ ಸಂಜೆ 4 ಗಂಟೆಗೆ ರೈತರು, ಕನ್ನಡಪರ ಹೋರಾಟಗಾರ ಜೊತೆ ಕೆಆರ್ಎಸ್ ಗೆ ಮುತ್ತಿಗೆ ಹಾಕಿ  ಸಂಘಟನೆಗಳು ಪ್ರತಿಭಟನೆ ಮಾಡಲಿದೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ