ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನೀರು ಸರಬರಾಜು‌ ಸ್ಥಗಿತ

ಸೋಮವಾರ, 5 ಸೆಪ್ಟಂಬರ್ 2022 (20:43 IST)
ಒಂದು ಕಡೆ ಮಳೆರಾಯ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಇದರ ಮದ್ಯೆ ಜನರಿಗೆ ಕುಡಿಯಲು ನೀರು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.ಇವತ್ತು ಮತ್ತು ನಾಳೆ ಯಶವಂತಪುರ,ಮಲೇಶ್ವರಂ ಸೇರಿದಂತೆ ಹಲವೆಡೆ ಜನರಿಗೆ ಕುಡಿಯಲು ನೀರು ಸಿಗಲ್ಲ.ಜಲಮಂಡಳಿಯ ಜಲರೇಚಕ ಯಂತ್ರಗಾರ ಸಂಪೂರ್ಣ ಜಲಾವೃತವಾಗಿದ್ದು,ಮಂಡ್ಯ ಜಿಲ್ಲೆ ಮಾಳವಳ್ಳಿ ತಾಲೂಕಿನ ಟಿಕ್ಕೆ ಹಳ್ಳಿಯಲ್ಲಿರುವ ಕೇಂದ್ರದಿಂದ ಇಷ್ಟು ದಿನ ನಗರದಕ್ಕೆ ನೀರು ಸರಬರಾಜು ಹಾಕ್ತಿತ್ತು.ಆದ್ರೆ ಜಲರೇಚಕ ಯಂತ್ರಗಾರ  ಕೆಟ್ಟು ನಿಂತಿರುವುದರಿಂದ ಈಗ ನಗರದಲ್ಲಿ‌ ಜನರಿಗೆ ಎರಡು ದಿನ ಕುಡಿಯಲು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ