ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ದರಿದ್ದೇವೆ-ಮಾಜಿ ಸಿಎಂ ಬೊಮ್ಮಾಯಿ

ಸೋಮವಾರ, 21 ಆಗಸ್ಟ್ 2023 (16:09 IST)
ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪೀಠ ರಚಿಸಿ ವಿಚಾರಣೆ ಆಗಬೇಕೆಂದು ತೀರ್ಮಾನವಾಗಿದೆ.ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು.ಈಗಾಗಲೇ ಟ್ರಿಬ್ಯುನಲ್ ಆದೇಶ ಬಂದು,CWMA ಇದೆ.ನಮ್ಮ ರಾಜ್ಯದ ಬೇಡಿಕೆ,ವಸ್ತು ಸ್ಥಿತಿ ಪ್ರತಿಪಾದಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
 
ಒಂದು ಕಡೆ ನೀರು ಬಿಟ್ಟು,ಇನ್ನೊಂದು ಕಡೆ ಪರಮಾರ್ಶೆ ಮಾಡಿ ಅಂತಾರೆ.ಸರ್ಕಾರಕ್ಕೆ ಸ್ಪಷ್ಟವಾದ ನೀತಿ ಇಲ್ಲ.ಕಾನೂನು ಅಂಶಗಳ ಮೇಲೆ ಸರ್ಕಾರ ಗಮನ ಹರಿಸಿ ಗಂಭೀರವಾಗಿ ತೆಗೆದುಕೊಳ್ಳವೇಕು.ವಿಪಕ್ಷವಾಗಿ ಸಹಕಾರ ಕೊಡುತ್ತೇವೆ,ನೆಲ ಜಲ ವಿಚಾರದಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ.ಸರ್ಕಾರಕ್ಕೆ ಸಹಕಾರ ಕೊಡಲು ಸಿದ್ದರಿದ್ದೇವೆ.ಆ ಭಾಗದ ರೈತರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ.ಆ ರೈತರ ಕೂಗಿಗೆ ಆಕ್ರೋಶಕ್ಕೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕಾಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
 
ಇನ್ನೂ ಸರ್ವ ಪಕ್ಷ ಸಭೆ ವಿಚಾರವಾಗಿ ನಮಗಿನ್ನೂ ಆಹ್ವಾನ ಬಂದಿಲ್ಲ.ಆಹ್ವಾನ ಬಂದರೆ,ಸಹಕಾರ ನೀಡುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ