ನಾವು ಸಮಾಜವನ್ನ ಜೋಡಿಸೋ ಕೆಲಸ ಮಾಡ್ತಿದ್ದೇವೆ- ಡಿಸಿಎಂ ಡಿಕೆಶಿ

ಶುಕ್ರವಾರ, 6 ಅಕ್ಟೋಬರ್ 2023 (13:00 IST)
ಶಿವಮೊಗ್ಗದಲ್ಲಿ ಬಿಜೆಪಿ ಸತ್ಯಶೋಧನೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಯಾರು ಕಾನೂನು ಮೀರಿ ತಪ್ಪು ಮಾಡಿದ್ದಾರೆ .ಅವರಿಗೆಲ್ಲಾ ಶಿಕ್ಷೆ ಆಗಲೇಬೇಕು.ಅವ್ರು ಹಿಂದೂ ಅಥವಾ ಮುಸ್ಲಿಂ ಇರಬಹುದು.ಕಾನೂನನ್ನ ರಕ್ಷಣೆ ಮಾಡೋ ಕೆಲಸ ಮಾಡ್ತೇವೆ.ಅವರ ಸತ್ಯಶೋಧಕ ಏನಿದೆ?ಸಮಾಜವನ್ನ ಒಡೆಯೋ ಕೆಲಸ ಮಾಡ್ತಿದ್ದಾರೆ.ನಾವು ಸಮಾಜವನ್ನ ಜೋಡಿಸೋ ಕೆಲಸ ಮಾಡ್ತಿದ್ದೇವೆ.ಹಿಂದೆ ಹೇಳಿದ್ದೇನೆಲ್ಲಾ ಕಬ್ಬಿಣದಲ್ಲಿ ಎರಡು ಕೆಲಸ ಮಾಡಬಹುದು.ಒಂದು ಸೂಜಿ ಒಂದು ಕತ್ರಿ ತರ ಕೆಲಸ ಮಾಡಬಹುದು.ನಾವು ಸೂಜಿ ತರ ಹೋಲಿಯೋಕ್ಕೆ ಕೆಲಸ ಮಾಡ್ತಿದ್ದೇವೆ.ಅವ್ರು ಕತ್ತಿ ಮಾಡಿ ಸಮಾಜವನ್ನ ಒಡೆಯೋ ಕೆಲಸ ಮಾಡ್ತಿದ್ದಾರೆ.ಇದೇ ಬಿಜೆಪಿಗೂ ಕಾಂಗ್ರೆಸ್ಗೂ ಇರೋ ವ್ಯತ್ಯಾಸ.ನಮ್ಮ ಜಿಲ್ಲಾಧಿಕಾರಿಗಳು ಎಲ್ಲ ಕ್ರಮವನ್ನ ತೆಗೆದುಕೊಂಡಿದ್ದಾರೆ.ಶಾಂತಿಯನ್ನ ಕಾಪಾಡೋ ಕೆಲಸ ಮಾಡ್ತೇವೆ ರಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ