ಬಾವಿ ನೀರಿನ ವಿವಾದ: ವ್ಯಕ್ತಿಯೊಬ್ಬನಿಗೆ ನಾಲ್ವರಿಂದ ಹಿಗ್ಗಾಮುಗ್ಗಾ ಥಳಿತ

ಮಂಗಳವಾರ, 30 ಅಕ್ಟೋಬರ್ 2018 (18:32 IST)
ಬಾವಿ ನೀರಿಗಾಗಿ  ನಾಲ್ಕು ಜನರಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಟಾಳ ಗ್ರಾಮದ ಅಶೋಕ ಸಾಲುಂಕೆ   ಎನ್ನುವವರಗೆ  ಪಕ್ಕದ ಜಮೀನಿನ ಮಾಲಿಕರಿಂದ ಥಳಿತವಾಗಿದೆ.

ರಮೇಶ ಅಪ್ಪಸಾಬ ಜಾಧವ ಇವರಿಂದ  ಅಶೋಕ ಸಾಲುಂಕೆಗೆ ಥಳಿತವಾಗಿದೆ. ಅರಟಾಲ ಗ್ರಾಮ ತೋಟದ ಮನೆಗಳು 
 ಜಮೀನಿನಲ್ಲಿರುವ ಬಾವಿಯಿಂದ ಕಲುಷಿತ ನೀರು ಹೋರ ಹಾಕಿದ ವಿಚಾರವಾಗಿ ಹಲ್ಲೆ ನಡೆಸಲಾಗಿದೆ.  

ರಮೇಶ ಜಾಧವ  ಜಮೀನಿಗೆ ನೀರು ನುಗ್ಗಿದೆ. ಇದರಿಂದ  ಮಾತಿನ ಚಕಮಕಿ  ನಡೆದು, ನಾಲ್ಕು ಜನರಿಂದ ಅಶೋಕ ಸಾಲುಂಕೆಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ.

ಹಲ್ಲೆಗೊಳಗಾದ ಅಶೋಕ ಸಾಲುಂಕೆ ಮಾಹಾರಾಷ್ಟರದ ಮಿರಜಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ರಮೇಶ ಅಣ್ಣಾಪ್ಪಾ ಜಾಧವ, ಮೋಹನ ಅಣ್ಣಾಪ್ಪಾ ಜಾಧವ,  ರೇಖಾ ಅಣ್ಣಾಪ್ಪಾ ಜಾಧವ, ಶೋಭಾ  ಜಾಧವ ನಾಲ್ಕು ಜನರ ಮೇಲೆ ಪ್ರಕರಣ ದಾಖಲು ಆಗಿದೆ. ಐಗಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು,  ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ