ಕಾಲಹರಣ ಮಾಡುವುದೇ ರಾಜ್ಯ ಸರಕಾರದ ಕಾಯಕವಾಗಿದೆ: ಕುಮಾರಸ್ವಾಮಿ

ಸೋಮವಾರ, 6 ಫೆಬ್ರವರಿ 2017 (17:52 IST)
ಕಾಲಹರಣ ಮಾಡುವುದೇ ರಾಜ್ಯ ಸರಕಾರದ ಕಾಯಕವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸರಕಾರಿ ಅಧಿಕಾರಿಗಳಷ್ಟೇ ಅಲ್ಲ, ರಾಜ್ಯ ಸರಕಾರವೂ ನಿಷ್ಕ್ರಿಯವಾಗಿದೆ. ಮಲಗಿದಂತೆ ನಟಿಸುವ ಸರಕಾರ ಎಂದು ಲೇವಡಿ ಮಾಡಿದರು.
 
ರಾಜ್ಯ ಸರಕಾರದ ಕಾರ್ಯವೈಖರಿಯ ಕುರಿತು ಸ್ವತಃ ಸಚಿವರೆ ವಿವರಣೆ ನೀಡಿದ್ದಾರೆ. ಮಲಗಿರುವ ರಾಜ್ಯ ಸರಕಾರವನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಆರೋಗ್ಯ ಸಚಿವರೇ ಹೇಳಿದ್ದಾರೆ. ಇನ್ನೂ ಎಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ