ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಮೂಕ ಪ್ರಾಣಿಗಳೆಷ್ಟು?

ಬುಧವಾರ, 24 ಏಪ್ರಿಲ್ 2019 (18:59 IST)
ಬೆಂಕಿ ಅವಘಡದಿಂದಾಗಿ ಆಗಬಾರದ ಅನಾಹುತ ಸಂಭವಿಸಿದೆ.

ಬೆಂಕಿ ಅವಘಡದಿಂದ ಪ್ರಾಣಿಗಳು ಬಲಿಯಾದ ದಾರುಣ ಘಟನೆ ನಡೆದಿದೆ. ಗುಡುಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ  ಆಕಲು, 4 ಎಮ್ಮೆ, 4 ಕರುಗಳು,  8 ಆಡುಗಳು ಸಜೀವ ದಹನವಾಗಿವೆ.

ಇನ್ನು ಹಲವಾರು ದನಕರುಗಳು ಗಂಭೀರ ಗಾಯಗೊಂಡಿವೆ. ಚಿಕ್ಕೋಡಿ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು  ಅಪ್ಪಣ್ಣ ಪಾಟೀಲ್ ಗೆ ಸೇರಿದ ಜಾನುವಾರುಗಳು ಸಾವನ್ನಪ್ಪಿವೆ.

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಹೋರವಲಯದ ತೋಟದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ‌ ಸಿಬ್ಬಂದಿ ಹಾಗೂ‌ ಪೊಲೀಸರು ಭೇಟಿ ನೀಡಿದ್ದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ