ಗಂಡ-ಹೆಂಡತಿ ಮನೆಯಲ್ಲಿದ್ದಾಗ ಆತ ಮಾಡಿದ್ದೇನು?

ಶುಕ್ರವಾರ, 28 ಜೂನ್ 2019 (15:46 IST)
ದಂಪತಿ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಆ ಖದೀಮ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುವಂತಾಗಿದೆ.

ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದ ಅತ್ತಿಬೆಲೆ ಪೊಲೀಸರಿಂದ ಆರೋಪಿ ಬಂಧನವಾಗಿದೆ.

ತಮಿಳುನಾಡು ಮೂಲದ ಶ್ರೀನಿವಾಸನ್  (32)  ಬಂಧಿತ ಆರೋಪಿಯಾಗಿದ್ದಾನೆ.

ಜೂನ್ 21ನೇ ರಂದು ಬೆಂಗಳೂರಿನ ಅತ್ತಿಬೆಲೆ ಗೋಲ್ಡನ್ ಗೇಟ್ ಬಡಾವಣೆಯಲ್ಲಿ ಮನೆಯಲ್ಲಿ ವೃದ್ಧ ದಂಪತಿ ಇಬ್ಬರೇ ಇರುವುದನ್ನು ಗಮನಿಸಿದ್ದನು ಅರೋಪಿ.  

ಆ ವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅವರ ಬಳಿಯಿದ್ದ ಒಡವೆ, ನಗದು, ಕಸಿದುಕೊಂಡು ಪರಾರಿಯಾಗಿದ್ದನು.
ಬಂಧಿತ ಆರೋಪಿ ವಿರುದ್ಧ ತಮಿಳುನಾಡಿನಲ್ಲಿ ಕೊಲೆ ದಾಖಲಾಗಿರುವುದು ಗೊತ್ತಾಗಿದೆ. ಬಂಧಿತ ಆರೋಪಿಯಿಂದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ