ಆರೋಗ್ಯ ಖಾತೆ ಬದಲಾವಣೆ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು?

ಸೋಮವಾರ, 12 ಅಕ್ಟೋಬರ್ 2020 (10:44 IST)
ಬೆಂಗಳೂರು : ಮುನಿರತ್ನಗೆ ಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ  ಮುನಿರತ್ನ ಪರವಾಗಿ ಸಚಿವ ಸುಧಾಕರ್ ಬ್ಯಾಟ್ ಬೀಸಿದ್ದಾರೆ.

ಮುನಿರತ್ನಗೆ ಟಿಕೆಟ್ ಕೊಟ್ರೆ ಮಾತು ಉಳಿಸಿದಂತೆ. ಕಾಂಗ್ರೆಸ್ ತೊರೆದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಮುನಿರತ್ನಗೂ ಟಿಕೆಟ್ ಸಿಗುವ ಭರವಸೆ ಇದೆ. ಮುನಿರತ್ನ ಟಿಕೆಟ್ ಬಗ್ಗೆ ವರಿಷ್ಠರ ಜತೆ ಚರ್ಚೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹಾಗೇ ಆರೋಗ್ಯ ಖಾತೆ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು,  ಆರೋಗ್ಯ ಖಾತೆ ಅತ್ಯುತ್ತಮವಾಗಿ ನಿರ್ವಹಿಸುವೆ. ಆರೋಗ್ಯ ಇಲಾಖೆಯಲ್ಲಿ ಬದಲಾವಣೆ ತರುವೆ. ಕೊರೊನಾ ನಿಯಂತ್ರಣದಲ್ಲಿ ಕ್ರಾಂತಿಕಾರಕ ಕೆಲಸ ಮಾಡುವೆ. ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡಬೇಕು. ಕ್ರಾಂತಿಕಾರಕ ಕೆಲಸಕ್ಕೆ ಸಿಎಂ ಸೂಚಿಸಿದ್ದಾರೆ. ಅವರು ಹೇಳಿದಂತೆ ಮಾಡುವೆ ಎಂದು ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ