ಮೋದಿ ಸರಕಾರದ ನಡೆ ಬಗ್ಗೆ ಬಿಜೆಪಿ ಸಚಿವ ಹೇಳಿದ್ದೇನು?

ಸೋಮವಾರ, 1 ಜೂನ್ 2020 (15:47 IST)
ಕೇಂದ್ರ ಸರಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಒಂದು ವರ್ಷ ಪೂರೈಸಿರುವ ನಡುವೆ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಹಾರ್ಡ್ ವರ್ಕ್, ಪ್ರಾಮಾಣಿಕ ಆಡಳಿತದ ಮೂಲಕ ದೇಶದ ಜನರ ಬೆಂಬಲ ಪಡೆದು ಪಾರದರ್ಶಕತೆ, ಭ್ರಷ್ಟಾಚಾರದಿಂದ ಮುಕ್ತವಾದ ಆಡಳಿತವನ್ನು ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ. ಅವರ ಆಡಳಿತದಿಂದ ದೇಶ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ವ್ಯವಸ್ಥೆಗಳಲ್ಲಿ ಸುಧಾರಣೆ, ತಂತ್ರಜ್ಞಾನ ಅಳವಡಿಕೆ, ಮೊದಲು ಒನ್ ಕಂಟ್ರಿ - ಒನ್ ಟ್ಯಾಕ್ಸ್, ಒನ್ ಕಂಟ್ರಿ ಒನ್ ಒನ್ ರೇಷನ್ ಎಂಬ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೇ ಒನ್ ಕಂಟ್ರಿ- ಒನ್ ಪಾಸ್ಟಾಗ್ ಮೂಲಕ ಸರ್ಕಾರದ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ