ಲೈಸನ್ಸ್ ನೀಡೋಕೆ ಲಂಚ ಕೇಳಿದವನಿಗೆ ಏನಾಯ್ತು?

ಮಂಗಳವಾರ, 21 ಜುಲೈ 2020 (19:05 IST)
ಲೈಸನ್ಸ್ ನೀಡಲು ಲಂಚ ಕೇಳಿದವನಿಗೆ ತಕ್ಕ ಪಾಠವೇ ಕಲಿಸಿದಂತಾಗಿದೆ.

ಗುತ್ತಿಗೆದಾರನಿಗೆ ಕ್ಲಾಸ್ 4 ಲೈಸನ್ಸ್ ನೀಡಲು ಲ೦ಚ ಸ್ವಿಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಎ ಸಿ ಬಿ ಪೊಲೀಸರು ವಶಪಡೆದುಕೊ೦ಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.  

ಗದಗ ನಗರದ ಮಹಾವೀರ ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಾಯಾ೯ಲಯದಲ್ಲಿ ಇಲಾಖೆಯ ಹುನುಮ೦ತ ಕದಾ೦ಪೂರ, ಗುತ್ತಿಗೆದಾರ ಆನ೦ದ ಅವರಿಗೆ ಕ್ಲಾಸ್ 4 ಲೈಸನ್ಸ್ ಆದೇಶ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು.

ಆನ೦ದ ಅವರಿಂದ ಹನುಮಂತ ಕದಾ೦ಪೂರ ಲಂಚ ಪಡೆಯುತ್ತಿರುವ ಸ೦ದರ್ಭದಲ್ಲಿ ಎ ಸಿ ಬಿ ಪೊಲೀಸರು ದಾಳಿ ಮಾಡಿದ್ದಾರೆ.
ಎ ಸಿ ಬಿ ಡಿವೈಎಸ್ಪಿ ವಾಸುದೇವರಾವ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ