ಬೆಂಗಳೂರು: ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಲಿ ಎಂದು ಮತ್ತೆ ಕೊರೋನಾ ವಕ್ಕರಿಸಿಕೊಂಡಿದೆ. ಕೊರೋನಾ ಜೆಎನ್ 1 ಹೊಸ ತಳಿಯ ಕೇಸ್ ಗಳು ಸಾಕಷ್ಟು ಕಂಡುಬರುತ್ತಿದೆ. ಕೊರೋನಾ ಹೊಸ ತಳಿಯ ಲಕ್ಷಣಗಳೇನು? ಯಾವಾಗ ಆಸ್ಪತ್ರೆಗೆ ಹೋಗಬೇಕು? ಇಲ್ಲಿದೆ ವಿವರ.
ಕೊರೋನಾ 19 ಎಂಬುದು ಇಡೀ ವಿಶ್ವವನ್ನೇ ನಡುಗಿಸಿದ ಖಾಯಿಲೆ. ಸಾಕಷ್ಟು ಜನ ಈ ಖಾಯಿಲೆಗೆ ಬೀದಿ ಹೆಣವಾದರು. ಎಷ್ಟೋ ದಿನ ಲಾಕ್ ಡೌನ್ ಎಂದು ಜೀವ, ಜೀವನವನ್ನೂ ಕಳೆದುಕೊಂಡರು. ಈಗ ಕೊರೋನಾ ಹೊಸ ರೂಪದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ.
ಕರ್ನಾಟಕದಲ್ಲಿ ಈಗ ಸಾಕಷ್ಟು ಸಕ್ರಿಯ ಪ್ರಕರಣಗಳು ಕಂಡುಬರುತ್ತಿದೆ. ಕೊರೋನಾ ಬಗ್ಗೆ ಎಚ್ಚರಿಕೆಯಿರಲಿ, ಆದರೆ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ಹೇಳಿದೆ. ವಿಶೇಷವಾಗಿ ಉಸಿರಾಟದ ಸಮಸ್ಯೆಯಿರುವವರು, ವಯೋವೃದ್ಧರು, ಗರ್ಭಿಣಿಯರು, ಹೃದಯ ಸಂಬಂಧೀ ಖಾಯಿಲೆ ಇರುವವರು ಅತೀವ ಎಚ್ಚರಿಕೆ ವಹಿಸಬೇಕು.
ಹೊಸ ತಳಿಯ ಲಕ್ಷಣಗಳು
-ತಲೆನೋವು
-ತಲೆ ಸುತ್ತಿದಂತಾಗುವುದು
-ಹೊಟ್ಟೆ ಸಂಬಂಧೀ ಸಮಸ್ಯೆಗಳು
-ಮಾಂಸಖಂಡಗಳಲ್ಲಿ ನೋವು
-ರುಚಿ, ವಾಸನೆ ಕಳೆದುಕೊಳ್ಳುವುದು.
ಇವಿಷ್ಟು ಹೊಸ ತಳಿಯ ಲಕ್ಷಣಗಳಾಗಿವೆ. ಉಸಿರಾಟದ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ಹೇಳುವ ಸ್ವಚ್ಛತೆ, ಸ್ಯಾನಿಟೈಸ್ ಮತ್ತು ಮಾಸ್ಕ್ ಧಾರಣೆ ಮಾಡುವ ಮೂಲಕ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಸಮಸ್ಯೆಯಾಗದು.