ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ಯಾವ ಗಿಫ್ಟ್ ಕೊಡ್ತಾರಂತೆ ಗೊತ್ತಾ?

ಸೋಮವಾರ, 18 ಡಿಸೆಂಬರ್ 2017 (11:50 IST)
ಯಾದಗಿರಿ: ಗುಜರಾತ್ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ 'ಇದು ನನ್ನ ರಾಜ್ಯ, ನನ್ನ ಮರ್ಯಾದೆ ಉಳಿಸಿ' ಎಂದ ಮೋದಿ ಭಾಷಣ ಮಾಡಿದ್ರು, ಇದು ಕೆಲಸ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ  ಯಾದಗಿರಿಯಲ್ಲಿ ಹೇಳಿದ್ದಾರೆ.


ಕಳೆದ ಬಾರಿಗಿಂತ ಈ ಬಾರಿ ನಮಗೆ ಹೆಚ್ಚಿನ ಸೀಟು ಸಿಕ್ಕಿದೆ. ರಾಹುಲ್ ನಾಯಕತ್ವಕ್ಕೆ ಬೆಂಬಲ ವ್ಯಕ್ತವಾಗಿದೆ. ಫಲಿತಾಂಶ ನೋಡಿದರೆ ನಾವು ಗೆದ್ದು ಸೋತಂತೆ ಅನಿಸುತ್ತೆ. ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಅಮಿತ್ ಶಾ, ಮೋದಿ ತಂತ್ರಗಾರಿಕೆ ಇಲ್ಲಿ ನಡೆಯಲ್ಲ. ಇದು ಶರಣರ ನಾಡು ಇಲ್ಲಿ ಕೋಮುವಾದ ನಡೆಯಲ್ಲ, ರಾಜ್ಯದಲ್ಲಿ ಗೆದ್ದು ರಾಹುಲ್ ಗೆ ಮೊದಲ ಉಡುಗೊರೆ ಕೊಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ