ನಿದ್ರೆ ಮಾಡೋರಿಗೆ ವೋಟ್ ಬೇಡ ಎಂದ ಸಿದ್ದರಾಮಯ್ಯ ಹೋದಲ್ಲೆಲ್ಲಾ ಮಲಗ್ತಾರೆ?

ಶನಿವಾರ, 29 ಜೂನ್ 2019 (17:46 IST)
ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರು‌? ಸಿದ್ದರಾಮಯ್ಯ ತಾನೇ? ಹೀಗಂತ ಪ್ರಶ್ನೆ ಕೇಳಿಬಂದಿದೆ.

ಮತ ಬಿಜೆಪಿಗೆ ಕೆಲಸಾ  ಮಾತ್ರ ನಮಗೆ  ಅಂದಿರೋ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ನಾನು ಕೇಳ್ತೇನೆ. ಹಾಸನಕ್ಕೆ ನಿತಿನ್ ಗಡ್ಕರಿ ಎರಡು ಕೋಟಿ ನೀಡಿದ್ದಾರೆ. ಹೆಚ್.ಡಿ.ರೇವಣ್ಣ ನೀವ್  ಹೇಗೆ ಆ ರಸ್ತೆಯಲ್ಲಿ ಓಡಾಡ್ತಿರಿ? ಕೆಂಪೇಗೌಡ ಏರ್ಪೋಟ್ ವಾಜಪೇಯಿ, ಅನಂತ್ ಕುಮಾರ್  ನೀಡಿದ್ದಾರೆ. ನೀವ್ ಯಾಕೆ ವಿಮಾನದಲ್ಲಿ ಓಡಾಡ್ತಿರಿ?

ಮೆಟ್ರೊ ಅನಂತ್ ಕುಮಾರ್ ನೀಡಿದ್ದಾರೆ. ಮತ್ತೆ ಯಾಕೆ ಮೆಟ್ರೊ ಉದ್ಘಾಟನೆಗೆ ಹೋಗ್ತಿರಿ? ನಾಚಿಕೆ ಮಾನ ಮರ್ಯಾದೆ ನಿಮಗೆ ಇದೆಯಾ? ಹೀಗಂತ ಸಿದ್ದರಾಮಯ್ಯ ಮತ್ತು ಸಿಎಂ ಮೇಲೆ ವ್ಯಂಗ್ಯ ಮಿಶ್ರಿತ ಧಾಟಿಯಲ್ಲಿ ವಾಗ್ದಾಳಿ ಮಾಡಿದ್ದಾರೆ ಬಿಜೆಪಿಯ ಆರ್. ಅಶೋಕ್.

ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರು? ಸಿದ್ದರಾಮಯ್ಯ ತಾನೇ? ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ ನೀವು ನಿಮ್ಮ ಅಪ್ಪನ ಮನೆಯಿಂದ ದುಡ್ಡು ತಂದು ಕೆಲಸ ಮಾಡಿ ಎಂದು ನಾವೇನು ಕೇಳೋದಿಲ್ಲ. ನಾವು ಕಟ್ಟಿರುವ ಟ್ಯಾಕ್ಸ್ ಹಣ ಇದೆಯಲ್ಲಾ ಅದರಲ್ಲಿ ಕೆಲಸ ಮಾಡಿ ಎಂದರು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ