ಸರಕಾರಿ ಜಾಗ ಕಬಳಿಕೆ ಮಾಡಿಕೊಂಡ ಶಾಸಕ ಯಾರು ಗೊತ್ತಾ?

ಗುರುವಾರ, 3 ಜನವರಿ 2019 (18:08 IST)
ತನ್ನ ಸ್ವಂತ ಊರಿನಲ್ಲಿ ಸರಕಾರಿ‌ ಜಾಗವನ್ನು  ಒತ್ತುವರಿ ಮಾಡಿಕೊಂಡಿರುವ ಆರೋಪ ಶಾಸಕರೊಬ್ಬರ ವಿರುದ್ಧ ಕೇಳಿಬಂದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.
ಮಾರಮ್ಮ ದೇವಸ್ಥಾನ ಪಕ್ಕದಲ್ಲಿ ಇರುವ ಜಾಗದಲ್ಲಿ ತನ್ನ ಸ್ವಂತಕ್ಕೆ  ಕಾಂಪ್ಲೆಕ್ಸ್ ಗಳನ್ನು ಶಾಸಕ ಪ್ರತಾಪಗೌಡ ಪಾಟೀಲ  ಕಟ್ಟಿಕೊಂಡಿದ್ದಾರೆ ಎಂದು ಜನರು ದೂರಿದ್ದಾರೆ.

ಸದ್ಯ ಮಸ್ಕಿ ಎಂ ಎಲ್ ಎ ಯಾಗಿರುವ  ಪ್ರತಾಪ್ ಗೌಡ ಪಾಟೀಲ ವಿರುದ್ಧ ಈ ಆರೋಪ ಕೇಳಿಬಂದಿದೆ.
ತನ್ನ ಪ್ರಭಾವ ಬಳಸಿ ಪಂಚಾಯತಿಯಲ್ಲಿ ಡಿಮ್ಯಾಂಡ ಬುಕ್ ನಲ್ಲಿ ಮನೆಗಳು ಎಂದು ನಮೂದಿಸಿ ಅದರ ಬದಲಾಗಿ ಕಾಂಪ್ಲೆಕ್ಸ್ ಗಳನ್ನು ಕಟ್ಟಿಸಿಕೊಂಡು ಬಾಡಿಗೆಗೆ ಎಂಎಲ್ ಎ ಕೊಟ್ಟಿರುವ ಆರೋಪ ಕೇಳಿಬಂದಿದೆ.

ಶಾಸಕರ ವಿರುದ್ಧ ಆರೋಪ ಬಲವಾಗಿ ಕೇಳಿಬಂದರೂ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಜನರು ದೂರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ