ಸುಮಲತಾ ಪರ ಇದ್ದವರು ಯಾರು? ಸಾಕ್ಷಿ ಇದೆ ಎಂದ ಸಚಿವ

ಭಾನುವಾರ, 19 ಮೇ 2019 (14:00 IST)
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರ್ಯಾರು ನಿಂತಿದ್ದರು ಎಂಬುದರ ಬಗ್ಗೆ ಸಾಕ್ಷಿ ಇದೆ ಅಂತ ಮಾಜಿ ಸಚಿವ ಹೊಸ ಬಾಂಬ್ ಸಿಡಿಸಿದ್ದಾರೆ.

ಸುಮಲತಾಗೆ ಬೆಂಬಲ ನೀಡಿರುವ ಕುರಿತು ಸಾಕ್ಷಿ ಎಲ್ಲವೂ ಮುಂದಿನ ದಿನಗಳಲ್ಲಿ ಚರ್ಚೆಗೆ ಬರಲಿದೆ ಎಂದು ಕಾಂಗ್ರೆಸ್ ನ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ರು.

ಮಂಡ್ಯದ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಯಾರು ಯಾರು ಕುಮಾರಸ್ವಾಮಿಗೆ ಮೋಸ ಮಾಡಿದ್ದಾರೆ. ದೇವೇಗೌಡ್ರ ಹೆಸರೇಳ್ತಿದ್ದವರು ಯಾರ್ಯಾರು ಎಲ್ಲಿಲ್ಲೆ ಮೋಸ ಮಾಡಿದ್ದಾರೆ. ಇವೆಲ್ಲವೂ ಈಗಾಗಲೇ ಚರ್ಚೆಗೆ ಬಂದಿದೆ. ಮಂಡ್ಯದಲ್ಲಿ ಏನೇನ್ ನಡೀತಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನಾನಂತೂ ಈ ಚುನಾವಣೆಯಲ್ಲಿ ತಟಸ್ಥವಾಗಿದ್ದೆ. ಅದನ್ನ ನಮ್ಮ ನಾಯಕರಿಗೆ ಸ್ಪಷ್ಟಪಡಿಸಿದ್ದೆ. ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯ ತೀರ್ಪು ಜನರ ತೀರ್ಪಾಗಿರುತ್ತೆ ಎಂದ ಅವ್ರು, ಸುಮಲತಾ ಪರ ಕೆಲ್ಸ ಮಾಡಿರೋ ಬಗ್ಗೆ ಮಹದೇಶ್ವರನ ಸನ್ನಿಧಿಯಲ್ಲಿ ಆಣೆ ಮಾಡೋ ಶಾಸಕ ಅನ್ನದಾನಿ ಸವಾಲಿಗೆ ಉತ್ತರಿಸಿ ಈ ವಿಚಾರದಲ್ಲಿ ಯೋಗ್ಯರಾಗಿರೋರು ಮಾತ್ರ ಮಾತನಾಡಿದಾಗ ಉತ್ತರ ಕೊಡ್ತೇನೆ.
ನನಗೆ ಅಂತವರಿಗೆಲ್ಲ ಉತ್ತರ ಕೊಡಬೇಕಾದ ಅನಿವಾರ್ಯಕತೆ ಇಲ್ಲ ಎಂದು ಅನ್ನದಾನಿಗೆ ತಿರುಗೇಟು ಕೊಟ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ