ಸುಮಲತಾಗೆ ಹಾಕಲಾದ ಮೊದಲ ವೋಟ್ ಅಸಿಂಧು ಎಂದು ಚುನಾವಣಾ ಆಯೋಗ ಹೇಳಲು ಕಾರಣವೇನು?

ಶುಕ್ರವಾರ, 10 ಮೇ 2019 (11:40 IST)
ಬೆಂಗಳೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ  ಸುಮಲತಾ ಅವರಿಗೆ ಹಾಕಲಾದ ಮೊದಲ ಮತ ಅಸಿಂಧು ಎಂದು ಚುನಾವಣಾ ಆಯೋಗ ಘೋಷಿಸಿದೆ.




ಮಂಡ್ಯ ಮೂಲದ ಸಿಆರ್ ಎಎಫ್ ಯೋಧ ರಾಜನಾಯಕ್ ಅವರು ಅಂಚೆ ಮತದಾನದ ಮೂಲಕ ಸುಮಲತಾಗೆ ಮತ ಹಾಕಿದ್ದರು. ಆದರೆ ಅವರು ಮತದಾನ ಮಾಡುವಾಗ ಸೆಲ್ಫಿ ತೆಗೆದು ಅದನ್ನು ಫೇಸ್ ಬುಕ್ ನಲ್ಲಿ ಪ್ರಚಾರ ಮಾಡಿದ್ದಾರೆ.


ಮತದಾನದ ಗೌಪ್ಯತೆ  ಕಾಪಾಡದೆ ಇದ್ದಿದ್ದಕ್ಕೆ ಹಾಗೂ ದುರ್ಬಳಕೆ ಮಾಡಿದ್ದಕ್ಕೆ ಯೋಧನ ವಿರುದ್ಧ ದೂರು ಕೂಡ ದಾಖಲಾಗಿದೆ. ಈ ಹಿನ್ನಲೆಯಲ್ಲಿ  ಯೋಧನ ಮತವನ್ನು ಅಸಿಂಧು ಎಂದು ಚುನಾವಣಾ ಆಯೋಗ ತಿರಸ್ಕರಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ