ಮೈತ್ರಿ ಸರಕಾರ ಭವಿಷ್ಯ ವರಿಷ್ಠರ ಕೈಯಲ್ಲಿ ಅಂತ ಡಿಸಿಎಂ ಹೇಳಿದ್ಯಾಕೆ?

ಭಾನುವಾರ, 23 ಜೂನ್ 2019 (19:03 IST)
ವಯಕ್ತಿಕ ಅಭಿಪ್ರಾಯಗಳಿಗಿಂತ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯವಾಗಿರುತ್ತದೆ. ಹೀಗಂತ ಡಿಸಿಎಂ ಮೈತ್ರಿ ಸರಕಾರದ ಭವಿಷ್ಯ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವಿದೆ. ಸರಕಾರದ ಅಳಿವು- ಉಳಿವಿನ ಕುರಿತು ಕೆಲವು ನಾಯಕರು ನೀಡುತ್ತಿರುವಂತಹ ಹೇಳಿಕೆಗಳನ್ನು ಗಮನಿಸುತ್ತಿರುವುದಾಗಿ ತಿಳಿಸಿದ ಅವರು, ಸೋಲಿನ ಹತಾಶೆಯಲ್ಲಿ ಈ ರೀತಿಯ ಹೇಳಿಕೆ ಸಾಮಾನ್ಯವಾಗಿ ಬರುತ್ತದೆ.

ಎಂ.ವೀರಪ್ಪ ಮೊಯ್ಲಿ ಹಿರಿಯ ರಾಜಕಾರಣಿಯಿದ್ದಾರೆ. ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಹೇಳಿದ್ರು.

ಹೆಚ್.ಡಿ.ದೇವೇಗೌಡರೂ ಈ ಕುರಿತು ಮಾತನಾಡಿದ್ದಾರೆ. ಎಲ್ಲ ವಿಚಾರಗಳ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕುಳಿತು ನಿರ್ಧಾರ ಮಾಡಬೇಕು ಎಂದರು.

ಸಿಎಂ ಗ್ರಾಮವಾಸ್ತವ್ಯಕ್ಕೆ ಪರ್ಯಾಯವಾಗಿ ತಾವು ಜನಸಂಪರ್ಕ ಸಭೆ ನಡೆಸುತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ