ಜಿಂದಾಲ್ ಕಂಪನಿಗೆ ಕೊಟ್ಟಿರುವ ಭೂಮಿ ಲೆಕ್ಕ ಕೊಡಿ

ಶನಿವಾರ, 22 ಜೂನ್ 2019 (16:39 IST)
ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಆದಷ್ಟು ಬೇಗ ಈ ಕೆಲಸ ಆಗಬೇಕು. ಹೀಗಂತ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ನ ಮಾಜಿ ಸಚಿವ ಖಡಕ್ ಸೂಚನೆ ನೀಡಿದ್ದಾರೆ.

ಹುಬ್ಬಳ್ಳಿ ಯಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದು, ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಅದು ಆದಷ್ಟು ಬೇಗ ಆಗುವುದು ಸೂಕ್ತ ಎಂದಿದ್ದಾರೆ.

ಜಿಂದಾಲ್ ಗೆ 3666 ಎಕರೆ ಭೂಮಿ ಪರಭಾರೆ ಮಾಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಸರಕಾರವು ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ವಿಷಯವಾಗಿ ಗಂಭೀರ ಅಧ್ಯಯನ ಮಾಡಲು ಸಮಿತಿ ರಚಿಸಿದ್ದು ಸಕಾರಾತ್ಮಕ ನಿರ್ಣಯವಾಗಿದೆ ಎಂದು ಹೇಳಿದ್ರು.

ಅದರ ಶಿಫಾರಸ್ಸಿನ ನಂತರ ಕ್ರಮಕೈಗೊಳ್ಳಲಿದೆ. ಆ ನಿಟ್ಟಿನಲ್ಲಿ ಸಚಿವ ಸಂಪುಟ ಉಪ ಸಮಿತಿ ತಕ್ಷಣ ಕಾರ್ಯ ಪ್ರವೃತ್ತ ಆಗಬೇಕು ಎಂದು ಹೆಚ್ ಕೆ ಪಾಟೀಲ್ ಒತ್ತಾಯ ಮಾಡಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ