ಡಾ.ಸುಧಾಕರ್ ಕುಂಬಳಕಾಯಿ ಕಳ್ಳನಂತೆ ವರ್ತಿಸುವುದ್ಯಾಕೆ: ದಿನೇಶ್ ಗುಂಡೂರಾವ್ ವ್ಯಂಗ್ಯ
ಹಿಂದಿನ ಸರ್ಕಾರದಲ್ಲಿ ಪರ್ಸಂಟೇಜ್ ಭ್ರಷ್ಟಾಚಾರ ಇತ್ತು ಎಂದು ಮಾಧ್ಯಮಗಳ ಮುಂದೆಯೇ ಒಪ್ಪಿಕೊಂಡಿರುವ ಸುಧಾಕರ್ ಅವರಿಗೆ ಈ ಕೋವಿಡ್ ತನಿಖಾ ವರದಿ ತಮ್ಮ ಕೊರಳಿಗೆ ಉರುಳಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆಯೇ ಅನ್ನಿಸುತ್ತದೆ ಎಂದಿದ್ದಾರೆ.
ಇನ್ನೇನು ಸಂಪುಟ ಸಭೆಯಲ್ಲಿ ಕೋವಿಡ್ ತನಿಖಾ ವರದಿ ಬಹಿರಂಗವಾಗಲಿದೆ. ವರದಿಯಲ್ಲಿ ಏನಿದೆ ಎಂಬುದರ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಆದರೂ, ಸಂಸದ ಸುಧಾಕರ್ ಅವರು ತಮ್ಮ ಹೆಗಲನ್ನು ಮುಟ್ಟಿ ನೋಡಿಕೊಳ್ಳುತ್ತಾ ತಮ್ಮ ತಪ್ಪು ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಯೇ ಎಂದರು.