ಬಿಜೆಪಿ, ಜೆಡಿಎಸ್‌ ವಿರುದ್ಧದ ದೂರುಗಳಿಗೆ ರಾಜ್ಯಪಾಲರು ಕಣ್ಮುಚ್ಚಿ ಕುಳಿತಿರುವುದೇಕೆ

Sampriya

ಶನಿವಾರ, 31 ಆಗಸ್ಟ್ 2024 (18:42 IST)
ಬೆಂಗಳೂರು: ಪ್ರಧಾನಿ ಮೋದಿ, ಅಮಿತ್ ಶಾ ಕೈಗೊಂಬೆಯಂತೆ ವರ್ತಿಸುವ ರಾಜ್ಯಪಾಲರು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ದೂರುಗಳಿಗೆ ಏಕೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಮೋ-ಶಾ ಜೋಡಿಯ ಕೈಗೊಂಬೆಯಂತೆ ವರ್ತಿಸುವ ರಾಜ್ಯಪಾಲರು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ದೂರುಗಳಿಗೆ ಏಕೆ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವುದೇ ಯಕ್ಷ ಪ್ರಶ್ನೆ.

ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣದ ತನಿಖೆಗೆ ರಾಜ್ಯಪಾಲರಿಗೆ ಇಷ್ಟವಿಲ್ಲವೇ ?

ಮೇಲ್ನೋಟಕ್ಕೆ ಭಾರಿ ಅಕ್ರಮವಾಗಿದ್ದು ಕಂಡುಬಂದರೂ, ಲೋಕಾಯುಕ್ತವೇ ಅನುಮತಿ ಕೇಳಿದ್ದರೂ ಕುಮಾರಸ್ವಾಮಿಯವರ ಗಣ ಹಗರಣದ ತನಿಖೆ ಬೇಡವೇ?

ಮುರುಗೇಶ್ ನಿರಾಣಿಯವರ ಇನ್ವೆಸ್ಟ್ ಕರ್ನಾಟಕ ಹಗರಣವೂ ತನಿಖೆಯಾಗುವುದು ಬೇಡವೇ?

ಜನಾರ್ದನ ರೆಡ್ಡಿಯವರ ಅಕ್ರಮ ಅಸ್ತಿ ಗಳಿಕೆಯ ವಿಚಾರಣೆಯಾಗುವುದು ಬೇಡವೇ?

ಈ ಎಲ್ಲಾ ಪ್ರಕರಣಗಳ ಬಗ್ಗೆ ರಾಜ್ಯಪಾಲರು ತುಟಿ ಬಿಚ್ಚದಿರುವುದು ರಾಜ್ಯಪಾಲರ ರಾಜಕಾರಣದ ನಡೆ ಅಲ್ಲದೆ ಇನ್ನೇನು?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ