ಹೆಂಡತಿ ಮನೆಗೆ ಹೋಗುತ್ತಿದ್ದವ ಆಸ್ಪತ್ರೆ ಬೆಡ್ ಸೇರಿದ!

ಶನಿವಾರ, 20 ಜುಲೈ 2019 (15:36 IST)
ಆ ವ್ಯಕ್ತಿ ತನ್ನ ಪತ್ನಿಗೆ ಮನೆಗೆ ಅಂತ ಹೊರಟಿದ್ದ. ಆದರೆ ದಾರಿಯಲ್ಲಾದ ಸಣ್ಣ ಘಟನೆಯೇ ಆತನ ಜೀವನಕ್ಕೆ ಮಾರಕವಾಗಿದೆ. ಕೊನೆಗೆ ಆಸ್ಪತ್ರೆಯ ಬೆಡ್ ಸೇರುವಂತೆ ಮಾಡಿದೆ.  

ಲಕ್ನೋದ ಬಾರಾಬಂಕಿ ಹತ್ತಿರದ ರಾಘೋಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ ಎಂಬಾತ ತನ್ನ ಪತ್ನಿಯ ಮನೆಗೆ ಮದ್ಯರಾತ್ರಿ ಹೊರಟಿದ್ದನು.

ಆದರೆ ಆತ ಕಳ್ಳನೆಂದು ತಿಳಿದ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿರೋ ಘಟನೆ ನಡೆದಿದೆ.  ರಾತ್ರಿ ವೇಳೆ ಸುಜಿತ್ ಕುಮಾರ ತೆರಳುತ್ತಿರೋವಾಗ ನಾಯಿಗಳು ಆತನ ಬೆನ್ನು ಹತ್ತಿವೆ.

ಅವುಗಳಿಂದ ತಪ್ಪಿಸಿಕೊಳ್ಳಲು ಆತ ಮನೆಯೊಂದರೊಳಗೆ ಓಡಿದ್ದಾನೆ. ಆಗ ಮನೆಯವರು ಈತ ಕಳ್ಳ ಎಂದು ಕೂಗಿಕೊಂಡಿದ್ದಾರೆ.

ಆಗ ಸುತ್ತಲಿನ ಜನರು ಸೇರಿಕೊಂಡು ಆತನಿಗೆ ಥಳಿಸಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಜಿತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ