ಪತ್ನಿಯ ಕಥೆ ಫಿನಿಷ್ ಮಾಡಿ ವಿಷ ಹಾಕಿದ ಭೂಪ

ಶನಿವಾರ, 31 ಆಗಸ್ಟ್ 2019 (17:37 IST)
ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಗಂಡನೊಬ್ಬ ಪತ್ನಿಯ ಕಥೆ ಫಿನಿಷ್ ಮಾಡಿರೋ ಆರೋಪ ಕೇಳಿಬಂದಿದೆ.

ಬೆಳಗಾವಿಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿ ವಿರುದ್ಧ ಕೊಲೆಗೀಡಾಗಿರೋ ಪತ್ನಿಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

ಪತಿ ಬಸವರಾಜ್ ತನ್ನ ಪತ್ನಿಯಾಗಿರುವ ಲಕ್ಷ್ಮೀ ಅಂಗಡಿ (20)ಗೆ ವರದಕ್ಷಿಣೆ ಆಸೆಗಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಅಲ್ಲದೇ ಕೊಲೆ ಮಾಡಿದ ಬಳಿಕ ಆಕೆಯ ಬಾಯಿಗೆ ವಿಷ ಹಾಕಿದ್ದಾನೆಂದೂ ಹಾಗೂ ಆ ಮೂಲಕ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸೋಕೆ ಮುಂದಾಗಿದ್ದಾನೆಂದೂ ದೂರಲಾಗಿದೆ.
ಈ ಕುರಿತು ಪತಿ ವಿರುದ್ಧ ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ