ನನ್ನ ಕ್ಯಾಬ್ಗೆ ಆದ ಹಾನಿಗೆ ಹಣ ಸಂದಾಯ ಮಾಡುವಂತೆ ಕೇಳಿದೆ. ಆದರೆ ನಾನು ನಿಧಾನವಾಗಿ ಹೋಗುತ್ತಿದ್ದರಿಂದ ಅಪಘಾತವಾಗಿದೆ ಎಂದು ಆಕೆ ನನ್ನ ವಿರುದ್ಧವೇ ಕಿಡಿಕಾರಿದಳು. ಅಪಘಾತ ಮಾಡಿದ ಮಹಿಳೆ ಕಾರ್ನಿಂದ ಇಳಿದು ಏನಾಗಿದೆ ಕೇಳಲೂ ಇಲ್ಲ, ಕ್ಷಮೆಯಾಚಿಸಲು ಇಲ್ಲ. ಕಾರಿನಲ್ಲಿ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿವೆ. ಆದರೆ ಬೋರಿಂಗ್ ಆಸ್ಪತ್ರೆ ವೈದ್ಯರು ತಪ್ಪು ವರದಿ ನೀಡಿದ್ದಾರೆ, ಎಂದು ಕ್ಯಾಬ್ ಚಾಲಕ 35 ವರ್ಷದ ಶೇಖರ್ ರಾಮಚಂದ್ರ ದೂರಿದ್ದಾರೆ.