ಕೊರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭೃಷ್ಟಾಚಾರ-ಡಿಕೆಶಿ ಆರೋಪ

ಶುಕ್ರವಾರ, 31 ಜುಲೈ 2020 (14:44 IST)
ಮಂಗಳೂರು : ಕೊರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭೃಷ್ಟಾಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸರ್ಕಾರದ ಭೃಷ್ಟಾಚಾರದ ಬಗ್ಗೆ ಕೋರ್ಟ್ ಮೂಲಕ ತನಿಖೆ ನಡೆಸುತ್ತೇವೆ. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ  ರಾಜ್ಯ ಸರ್ಕಾರದಿಂದ ಲೀಗಲ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ  ರಾಜ್ಯ ಸರ್ಕಾರದ ನೋಟಿಸ್ ಗೆ ನಾವು ಉತ್ತರ ಕೊಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲಾ ದಾಖಲೆ ಇದೆ. ನಮಗೂ ಕಾನೂನು ಹೋರಾಟ ಮಾಡುವುದಕ್ಕೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ