ಹೆಚ್.ವಿಶ್ವನಾಥ್ ಗೆ ಭರ್ಜರಿ ಟಾಂಗ್ ನೀಡಿದ ಯಡಿಯೂರಪ್ಪ

ಸೋಮವಾರ, 13 ಜನವರಿ 2020 (18:52 IST)
ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗೆ ಸಿಎಂ ಭರ್ಜರಿಯಾಗಿ ತಿರುಗೇಟು ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಯಾರೋ ಕೇಳಿದ, ಹೇಳಿದ ಮಾತ್ರಕ್ಕೆ ಸಚಿವ ಸ್ಥಾನ ಎಲ್ಲರಿಗೂ ಕೊಡೋದಕ್ಕೆ ಆಗೋದಿಲ್ಲ. ಹೀಗಂತ ಖಡಕ್ ಸಂದೇಶವನ್ನು ರವಾನಿಸಿರೋ ಸಿಎಂ ಬಿ.ಎಸ್.ಯಡಿಯೂರಪ್ಪ, ಹೆಚ್.ವಿಶ್ವನಾಥ್ ಗೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.

ಯಾವ ಶಾಸಕರಿಗೆ ಯಾವ ಸ್ಥಾನ, ಯಾವ ಖಾತೆ, ಹುದ್ದೆ ಕೊಡಬೇಕು ಅನ್ನೋದನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಅಂತ ಹೇಳಿದ್ದಾರೆ.

ಹೆಚ್.ವಿಶ್ವನಾಥ್ ಮಾತನಾಡಿ, ರಾಜೀನಾಮೆ ನೀಡಿದ್ದ ಎಲ್ಲ ಶಾಸಕರಿಗೂ ಸಚಿವಸ್ಥಾನ ನೀಡುವಂತೆ ಒತ್ತಾಯ ಮಾಡಿದ್ರು. ಇದಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ