ಹುಟ್ಟೂರಿಗೆ ಬಂಪರ್ ಗಿಫ್ಟ್ ನೀಡಿದ ಯಡಿಯೂರಪ್ಪ; ಜೆಡಿಎಸ್ ಕೋಟೆಗೆ ಲಗ್ಗೆ

ಶನಿವಾರ, 27 ಜುಲೈ 2019 (12:45 IST)
ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡಿರೋ ಬಿ.ಎಸ್.ಯಡಿಯೂರಪ್ಪ ಹುಟ್ಟೂರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ತಮ್ಮ ಹುಟ್ಟೂರಾದ ಬೂಕನಕೆರೆಗೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ, ಕುಲದೇವರ ಆಶೀರ್ವಾದಕ್ಕೆ ಇಲ್ಲಿಗೆ ಬಂದಿರುವೆ. ಮನೆದೇವರಿಗೆ ಪೂಜೆ ಸಲ್ಲಿಸುವೆ. ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆಯುವೆ ಎಂದ್ರು.

ಬೂಕನಕೆರೆ ನಾನು ಹುಟ್ಟಿ ಬೆಳೆದಿರೋ ಊರು. ಇದರ ಅಭಿವೃದ್ಧಿ ಮಾಡೋದು ನನ್ನ ಕರ್ತವ್ಯ ಅಂತ ಯಡಿಯೂರಪ್ಪ ಹೇಳಿದ್ರು.

ಆ ಮೂಲಕ ಬೂಕನಕೆರೆಗೆ ಬಂಪರ್ ಗಿಫ್ಟ್ ಕೊಡುವೆ ಎನ್ನುವ ಮೂಲಕ ಜೆಡಿಎಸ್ ಕೋಟೆಯಲ್ಲಿ ಕಮಲ ಲಗ್ಗೆ ಇಡಲು ಯತ್ನಿಸುತ್ತಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ