‘ಯಡಿಯೂರಪ್ಪ ಸರಕಾರ ಉರುಳಿಸೋಕೆ ಬಿಜೆಪಿಯವರಿಂದಲೇ ಕುತಂತ್ರ’

ಬುಧವಾರ, 6 ನವೆಂಬರ್ 2019 (19:02 IST)
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಉರುಳಿಸಲು  ಕುತಂತ್ರ  ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದಾರೆ.
 

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಕೋರ್ ಕಮಿಟಿ  ಸಭೆಯಲ್ಲಿ ಚರ್ಚೆಯಾದ  ವಿಷಯಗಳ ಟೇಪ್  ಹೊರಹಾಕಿದವರು  ಯಾರು? ಆ ಸಭೆಯಲ್ಲಿ ಭಾಗವಹಿಸಿದವರು  ಬಿಜೆಪಿಯ ಹಿರಿಯ ನಾಯಕರು.

ಯಡಿಯೂರಪ್ಪ ಸರಕಾರ ಉರುಳಿಸಲು ಅವರ ಪಕ್ಷದವರೇ ಕುತಂತ್ರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ