ಯಡಿಯೂರಪ್ಪ ಜಗತ್ತು, ದೇಶ ಕಂಡ ಭ್ರಷ್ಟ: ಸಿಎಂ ಸಿದ್ದರಾಮಯ್ಯ

ಬುಧವಾರ, 1 ಮಾರ್ಚ್ 2017 (12:18 IST)
ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ತಮ್ಮ ಕುಟುಂಬಕ್ಕೆ 65 ಕೋಟಿ ರೂಪಾಯಿ ನೀಡಲಾಗಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಗತ್ತು, ದೇಶ ಕಂಡ ಅತಿಭ್ರಷ್ಟ ರಾಜಕಾರಣಿ.ಆರೋಪಿಸಲು ಬೇರೆ ಕಾರಣಗಳಿಲ್ಲವಾದ್ದರಿಂದ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಲೆಹರ್‌ಸಿಂಗ್ ಜೈರಿ ಫೇಕ್ ಆಗಿದ್ರೆ, ಕಾಂಗ್ರೆಸ್ ಡೈರಿನೂ ಫೇಕ್ ಆಗಿದೆ. ಕಾಂಗ್ರೆಸ್ ಅಸ್ತಿತ್ವವನ್ನು ಹಾಳುಮಾಡುವ ವಿನಾಶಕಾರಿ ಸಂಚು ಯಡಿಯೂರಪ್ಪ ರೂಪಿಸಿದ್ದಾರೆ ಎಂದು ಕಿಡಿಕಾರಿದರು.
 
ಲೆಹರ್‌ಸಿಂಗ್ ಡೈರಿ ಬಗ್ಗೆ ಬಿಎಸ್‌ವೈ ಏನು ಹೇಳ್ತಾರೆ? ಕಾಂಗ್ರೆಸ್ ಡೈರಿಯ ಬಗ್ಗೆ ಸ್ಪಷ್ಟನೆ ನೀಡುವುದಕ್ಕಿಂತ ಮುಂಚೆ ಲೆಹರ್‌ಸಿಂಗ್ ಡೈರಿ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ