ಕಣ್ಣೀರು ಹಾಕಿ ಹೀರೋ ಆದ ಯಡಿಯೂರಪ್ಪ, ವಿಲನ್ ಆದ ಬಿಜೆಪಿ ವರಿಷ್ಠರು

ಬುಧವಾರ, 28 ಜುಲೈ 2021 (12:13 IST)
ಬೆಂಗಳೂರು: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಯಡಿಯೂರಪ್ಪನವರ ನಿರ್ಗಮನದ ಬಗ್ಗೆ ಜನರಲ್ಲಿ ಯಾವ ಅಭಿಪ್ರಾಯವಿತ್ತೋ. ಆದರೆ ಅವರು ರಾಜೀನಾಮೆ ಪ್ರಕಟಿಸುವಾಗ ಮಾಡಿದ ಭಾಷಣದಿಂದಾಗಿ ಈಗ ಅವರು ಹೀರೋ ಆಗಿದ್ದಾರೆ. ಅವರ ರಾಜೀನಾಮೆ ಕೇಳಿದ ಬಿಜೆಪಿ ವರಿಷ್ಠರು ಜನರ ದೃಷ್ಟಿಯಲ್ಲಿ ವಿಲನ್ ಆಗಿದ್ದಾರೆ.


ಯಡಿಯೂರಪ್ಪ ವಿದಾಯ ಭಾಷಣದಲ್ಲಿ ತಾವು ಅನುಭವಿಸಿದ ಸಂಕಟವನ್ನು ಹೊರಹಾಕಿದ್ದು ನೋಡಿ ಜನ ಈಗ ಬಿಜೆಪಿ ವರಿಷ್ಠರ ಮೇಲೆ ಕೆಂಗಣ್ಣು ಬೀರಲು ಶುರು ಮಾಡಿದ್ದಾರೆ.

ಇಷ್ಟು ದಿನ ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿಯನ್ನು ಹೈಕಮಾಂಡ್ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆಪಾದನೆ ಜನರಿಂದ ವ್ಯಕ್ತವಾಗುತ್ತಿದೆ. ಅಷ್ಟರ ಮಟ್ಟಿಗೆ ಅವರ ವಿದಾಯ ಭಾಷಣ ಪ್ರಭಾವ ಬೀರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ