ಕುಮಾರಸ್ವಾಮಿಯವರನ್ನು ಕರಿಯಾ ಅಂತಾನೇ ಕರೀತಿನಿ, ಏನಿವಾಗ? ಜಮೀರ್ ಅಹಮ್ಮದ್

ಗುರುವಾರ, 8 ಏಪ್ರಿಲ್ 2021 (10:30 IST)
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ವರ್ಣದ ಹೆಸರಿನಲ್ಲಿ ಕರೆದು ವಿವಾದಕ್ಕೀಡಾಗಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


‘ನನ್ನ ಹೇಳಿಕೆ ವಿರೋಧಿಸಿ ಕೆಲವರು ನಿನ್ನೆ ನಮ್ಮ ಮನೆಯ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ ನಾನು ಕುಮಾರಸ್ವಾಮಿಯವರನ್ನು ಕರಿಯಾ ಅಂತಾನೇ ಕರಿಯೋದು. ಅವರು ಬೆಳ್ಳಗಿದ್ದರೆ ಹಾಗೆ ಹೇಳುತ್ತಿರಲಿಲ್ಲ. ನಾನು ಕುಳ್ಳಗಿದ್ದೇನೆ. ಅದಕ್ಕೆ ನಾನು ಕುಳ್ಳ. ದೇವರು ಯಾರು ಯಾರನ್ನು ಯಾವ ಯಾವ ರೀತಿ ಸೃಷ್ಟಿಸಿದ್ದಾನೋ ಅದಕ್ಕೆ ತಕ್ಕ ಹಾಗೆ ಇದ್ದೇವೆ’ ಎಂದು ಜಮೀರ್ ಅಹಮ್ಮದ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಮೀರ್ ಹೇಳಿಕೆ ವಿರುದ್ಧ ತಿರುಗಿಬಿದ್ದಿರುವ ಜೆಡಿಎಸ್ ಕಾರ್ಯಕರ್ತರು ಅವರ ವಿರುದ್ಧ ದೂರು ನೀಡಿದ್ದಾರೆ. ನಿನ್ನೆ ಬಸವಕಲ್ಯಾಣ ಅಸೆಂಬ್ಲಿಯಲ್ಲಿ ಜಮೀರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ