ಡಿಕೆಶಿ ವಿರುದ್ಧ ಗುರುಚರಣ್​ ಕೆಂಡಾಮಂಡಲ

ಗುರುವಾರ, 20 ಏಪ್ರಿಲ್ 2023 (18:41 IST)
ಮಾಜಿ ಸಿಎಂ S.M. ಕೃಷ್ಣ ಸಹೋದರನ ಪುತ್ರ, ಕಾಂಗ್ರೆಸ್‌ ಟಿಕೆಟ್ ವಂಚಿತ ಎಸ್.ಗುರುಚರಣ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.. ಗುರುಚರಣ್​​​ ಮಂಡ್ಯದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್​​​ ಸೇರಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್​ ವಿರುದ್ಧ ಗುಡುಗಿದ್ರು.. ಜೆಡಿಎಸ್​​ ಸೇರ್ಪಡೆಯಾಗುತ್ತಿದ್ದಂತೆ KPCC ಅಧ್ಯಕ್ಷ D.K.ಶಿವಕುಮಾರ್​ ವಿರುದ್ದ ಗುರುಚರಣ್ ಕೆಂಡಾಮಂಡಲರಾಗಿದ್ದಾರೆ.. ಡಿಕೆಶಿ ನಿನಗೆ ಟಿಕೆಟ್ ಎಂದು ಹೇಳಿ-ಹೇಳಿ ನನ್ನನ್ನ ಮುಗಿಸಿದ್ರು, ಕಾಂಗ್ರೆಸ್ ಪಕ್ಷ ಇನ್ನು ನಿರ್ನಾಮವಾಗೋದಂತು ಸತ್ಯ. ದುಡ್ಡು ಕೊಟ್ರೆ ಟೆರರಿಸ್ಟ್​ಗಳಿಗೂ ಬೇಕಾದ್ರು ಕಾಂಗ್ರೆಸ್​​ನವ್ರು ಟಿಕೆಟ್ ಕೊಟ್ಟು ಬಿಡ್ತಾರೆ ಎಂದು ಕಿಡಿಕಾರಿದ್ರು.. ಮದ್ದೂರಿನ ಮಕ್ಕಳು ಹಾಳಾಗಿ ಹೋಗ್ತಿದ್ದಾರೆ.. ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ಸಾಗ್ತಿದೆ ಎಂದರು. ಗುರುಚರಣ್​​ ಪರೋಕ್ಷವಾಗಿ ಕದಲೂರು ಉದಯ್ ಅನ್ನು ಗ್ಯಾಂಬ್ಲರ್ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ