ಶಿವಣ್ಣ ಪ್ರಚಾರದಿಂದ ನಮಗೇನು ಅಭ್ಯಂತರವಿಲ್ಲ

ಭಾನುವಾರ, 7 ಮೇ 2023 (15:00 IST)
ನಟ ಶಿವರಾಜಕುಮಾರ್​ ಪ್ರಚಾರಕ್ಕೆ ಸಂಸದ ಪ್ರತಾಪ್ ಸಿಂಹ, ಸಚಿವ ವಿ. ಸೋಮಣ್ಣ ಟೀಕೆ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಟರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ನಟ ಶಿವರಾಜ್​ಕುಮಾರ್ ಅವರು ಪ್ರಚಾರ ಮಾಡಿದರೇ ನನಗೇನು ಅಭ್ಯಂತರ ಇಲ್ಲ. ಕಾಂಗ್ರೆಸ್​ ಪರ ಪ್ರಚಾರಕ್ಕೆ ಸೋನಿಯಾ ಗಾಂಧಿ ಸಹ ಬರುತ್ತಿದ್ದಾರೆ. ಇಂದು ಹಾವೇರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬರುತ್ತಿದ್ದಾರೆ. ಮೊದಲಿಗಿಂತಲೂ ಈಗ ಪ್ರಧಾನಿ ಮೋದಿಯವರ ಅಲೆ ಜಾಸ್ತಿಯಾಗಿದೆ ಎಂದರು.. ಇನ್ನು ಮಾಜಿ ಸಚಿವ K.S. ಈಶ್ವರಪ್ಪ ಈ ಕುರಿತು ಮಾತನಾಡಿದ್ದು, ಇನ್ನು ಬಿಜೆಪಿ ನಾಯಕರು ಚಿತ್ರನಟರನ್ನು ಪ್ರಚಾರಕ್ಕೆ ಕರೆಸುತ್ತಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ.. ಆದರೆ ನಿನ್ನೆ ವರುಣದಲ್ಲಿ ನಟಿ ರಮ್ಯಾ, ದುನಿಯಾ ವಿಜಿ ಕರೆಸಿ ಕಾಂಗ್ರೆಸ್​ನವರು ಪ್ರಚಾರ ಮಾಡಿಸಿದ್ರು ಎಂದು ತಿರುಗೇಟು ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ