ಬೆಟ್ಟಿಂಗ್ ರಹಸ್ಯ ಬಗ್ಗೆ ಬಾಯಿಬಿಟ್ಟ ಸುಮಲತಾ ಅಂಬರೀಶ್

ಭಾನುವಾರ, 21 ಏಪ್ರಿಲ್ 2019 (14:05 IST)
ಈಗಿನ ಚುನಾವಣೆ ಮುಂದಿನವರೆಗೆ ಒಂದು ಪಾಠವಾಗಬೇಕು. ನನ್ನ ಬೆಂಬಲಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಡ್ತಿದ್ದಾರೆ ಇದು ಸರಿಯಲ್ಲ. ಹೀಗಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯದ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ಮತದಾನ ಮುಗಿದ ಬೆನ್ನಲ್ಲೆ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಚಿತ್ರರಂಗ, ರೈತ ಸಂಘ ಹಾಗೂ ಬೆಂಬಲಿಸಿದವರನ್ನು ಸ್ಮರಿಸಿದ್ದಾರೆ.
ಮಂಡ್ಯದಲ್ಲಿ ಮತದಾನ ಹೆಚ್ಚಳವಾಗಿರೋದು ನಿಜಕ್ಕೂ ಹೆಮ್ಮೆ, ಇದು ಪ್ರಶಂಸನೀಯ. ಮಹಿಳೆಯರು ಹೆಚ್ಚಿನ ಮತದಾನ ಮಾಡಿದ್ದಾರೆ ಎಂದರು.

ಸಿ.ಎಂ‌. ಹೇಳಿರೋ ಸುಮಲತಾ ಬೆಂಬಲಕ್ಕೆ ನಿಂತ  ಚಿತ್ರನಟರು ಪ್ರಾಯಶ್ಚಿತ್ತ ಮತ್ತು ಪಶ್ಚಾತಾಪ ಪಡಬೇಕಾಗೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಇದು ಯಾವ ರೀತಿ ಅನ್ನೋದು ನನಗೆ ಗೊತ್ತಾಗಲಿಲ್ಲ, ಇದು ಎಚ್ಚರಿಕೆ ಅನ್ನೋದನ್ನ ಬಹಿರಂಗ ಪಡಿಸಬೇಕೆಂದರು. ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಯುತ್ತಿರೋ ವಿಚಾರ ಗಮನಕ್ಕೆ ಬಂದಿದೆ.

ಯಾರು ಬೆಟ್ಟಿಂಗ್ ಕಟ್ಟುವ ರಿಸ್ಕ್ ತಗೊಳ್ಳಬೇಡಿ ಅದು ಒಳ್ಳೆಯದಲ್ಲ ಅಂತ ಸುಮಲತಾ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ